BengaluruCinema

ಮೈಸೂರಿನ ಶಕ್ತಿಧಾಮಕ್ಕೆ ಅಶೋಕ್‌ ಖೇಣಿ 1 ಕೋಟಿ ನೆರವು

ಬೆಂಗಳೂರು; ಡಾ.ರಾಜ್‌ಕುಮಾರ್‌ ಕುಟುಂಬ ನಿರ್ವಹಿಸುತ್ತಿರುವ ಅನಾಥ ಹೆಣ್ಣು ಮಕ್ಕಳ ಶಕ್ತಿಧಾಮಕ್ಕೆ ಉದ್ಯಮಿ ಹಾಗೂ ಮಾಜಿ ಶಾಸಕ ಅಶೋಕ್‌ ಅವರು 1 ಕೋಟಿ ರೂಪಾಯಿ ನೆರವು ನೀಡಿದ್ದಾರೆ.

ಅಶೋಕ್‌ ಖೇಣಿಯವರು ತಮ್ಮ ನೈಸ್‌ ಸಂಸ್ಥೆ ವತಿಯಿಂದ ಒಂದು ಕೋಟಿ ರೂಪಾಯಿ ಚೆಕ್‌ ನೀಡಿದ್ದಾರೆ. ಶಿವರಾಜ್‌ ಕುಮಾರ್‌ ಹಾಗೂ ಗೀತಾ ಶಿವರಾಜ್‌ಕುಮಾರ್‌ ದಂಪತಿ ಈ ಚೆಕ್‌ ಅನ್ನು ಪಡೆದಿದ್ದಾರೆ. ಪುನೀತ್‌ ರಾಜ್‌ ಕುಮಾರ್‌ ಅವರು ಮೈಸೂರಿನಲ್ಲಿರುವ ಶಕ್ತಿಧಾಮದ ನಿರ್ವಹಣೆ ಮಾಡುತ್ತಿದ್ದರು. ಇದೀಗ ಅದರ ಜವಾಬ್ದಾರಿಯನ್ನು ಶಿವರಾಜ್‌ಕುಮಾರ್‌ ಹಾಗೂ ಗೀತಾ ಶಿವರಾಜ್‌ಕುಮಾರ್‌ ವಹಿಸಿಕೊಂಡಿದ್ದಾರೆ.

 

Share Post