BengaluruPolitics

ನಾಳೆ ಸಿಎಂ ದೆಹಲಿ ಪ್ರಯಾಣ; ಪ್ರಧಾನಿ ಔತಣಕೂಟದಲ್ಲಿ ಭಾಗಿ

ಬೆಂಗಳೂರು; ಸಿಎಂ ಬಸವರಾಜ ಬೊಮ್ಮಾಯಿಯವರು ನಾಳೆ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರ ಅಧಿರಾವಧಿ ನಾಳೆಗೆ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಔತಣಕೂಟ ಏರ್ಪಡಿಸಿದ್ದಾರೆ. ಇದರಲ್ಲಿ ಭಾಗಿಯಾಗಲು ಸಿಎಂ ಬೊಮ್ಮಾಯಿಯವರು ದೆಹಲಿಗೆ ತೆರಳುತ್ತಿದ್ದಾರೆ.

ನಾಳೆ ರಾತ್ರಿ ಎಂಟು ಗಂಟೆಗೆ ಪ್ರಧಾನಿಯವರ ಔತಣಕೂಟವಿದೆ. ಹೀಗಾಗಿ ಸಿಎಂ ಬೊಮ್ಮಾಯಿಯವರು ನಾಳೆ ಮಧ್ಯಾಹ್ನ ದೆಹಲಿಗೆ ಹೊರಡಲಿದ್ದಾರೆ. ಅವರು ಸಂಜೆ ತನಕ ಕರ್ನಾಟಕ ಭವನದಲ್ಲಿ ತಂಗಲಿದ್ದು, ರಾತ್ರಿ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. ಶನಿವಾರ ಬೆಳಗ್ಗೆ ಅವರು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಇನ್ನು ಇದೇ ತಿಂಗಳ 28 ರಂದು ಬೊಮ್ಮಾಯಿಯವರು ಸಿಎಂ ಆಗಿ ಮೂರು ವರ್ಷ ತುಂಬಲಿದ್ದು, ಇದಕ್ಕಾಗಿ ಬಿಜೆಪಿ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಅಮಿತ್‌ ಷಾ ಅವರನ್ನು ಆಹ್ವಾನಿಸಲಿದ್ದಾರೆ ಎಂದು ತಿಳಿದುಬಂದಿದೆ.

Share Post