BengaluruCrime

ಶಾಲೆಗಳಿಗೆ ಬೆದರಿಕೆ ಪ್ರಕರಣ; ಕಮಿಷನರ್‌ ದಯಾನಂದ್‌ ಹೇಳಿದ್ದೇನು..?

ಬೆಂಗಳೂರು; ಬೆಂಗಳೂರಿನ ಬಸವೇಶ್ವರ ನಗರದ ನ್ಯಾಪಲ್‌ ಸ್ಕೂಲ್‌, ವಿದ್ಯಾಶಿಲ್ಪ ಸೇರಿದಂತೆ ಹದಿನೈದಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಈ  ಹಿನ್ನೆಲೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ದಯಾನಂದ್‌ ಅವರು, ಪೋಷಕರು ಯಾವುದೇ ಆತಂಕಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಬಾಂಬ್‌ ಪತ್ತೆ ದಳ ಹಾಗೂ ಬಾಂಬ್‌ ನಿಷ್ಕ್ರಿಯ ದಳಗಳನ್ನು ಈಗಾಗಲೇ ಶಾಲೆಗಳಿಗೆ ಕಳುಹಿಸಲಾಗಿದೆ. ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ. ಪೋಷಕರು ಯಾವುದೇ ಆತಂಕಕ್ಕೀಡಾಗುವ ಅವಶ್ಯಕತೆ ಇಲ್ಲ ಎಂದು ದಯಾನಂದ್‌ ಹೇಳಿದ್ದಾರೆ.

Share Post