CrimeDistricts

ಉಡುಪಿಯಲ್ಲಿ ದಾರುಣ; ಒಂದೇ ಕುಟುಂಬದ ನಾಲ್ವರ ಹತ್ಯೆ!

ಉಡುಪಿ; ಉಡುಪಿಯಲ್ಲಿ  ದಾರುಣ ಘಟನೆ ನಡೆದಿದೆ. ದುಷ್ಕರ್ಮಿಯೊಬ್ಬ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರನ್ನು ದಾರುಣವಾಗಿ ಹತ್ಯೆ ಮಾಡಿದ್ದಾನೆ. ಉಡುಪಿಯ ಸಂತೆಕಟ್ಟೆ ನೇಜಾರು ಸಮೀಪದಲ್ಲಿ ಈ ದುರ್ಘಟನೆ ನಡೆದಿದೆ. 

ತಾಯಿ ಹಾಗೂ ಮೂವರು ಮಕ್ಕಳನ್ನು ಹರಿತ ಆಯುಧದಿದಂದ ಚುಚ್ಚಿ ಕೊಲೆ ಮಾಡಲಾಗಿದೆ. ತಾಯಿ ಹಸೀನಾ (46), ಮಕ್ಕಳಾದ ಅಫ್ನಾನ್ (23), ಅಯ್ನಝ್ (21), ಆಸಿಂ (12) ಕೊಲೆಯಾದ ದುರ್ದೈವಿಗಳು.

ಮಹಿಳೆ ಹಸೀನಾ ಅವರ ಗಂಡ ವಿದೇಶದಲ್ಲಿ ಕೆಲಸದಲ್ಲಿದ್ದಾನೆ. ಇಲ್ಲಿ ಹಸೀನಾ ಮಕ್ಕಳ ಜೊತೆ ವಾಸವಿದ್ದರು. ಆದ್ರೆ ಅದೇನಾಯ್ತೋ ಏನೋ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿದ್ದು, ಹಸೀನಾ ಜೊತೆ ಮಾತಿನ ಚಕಮಕಿ ನಡೆಸಿದ್ದಾನೆ. ಇದೇ ವೇಳೆ ಆತ, ಹಸೀನಾ, ಅಫ್ನಾನ್ ಹಾಗೂ ಅಯ್ನಾಝ್‌ಗೆ ಇರಿದಿದ್ದಾನೆ.

ಕೂಗಾಟ ಕೇಳಿ ಹೊರಗಡೆ ಆಟವಾಡುತ್ತಿದ್ದ ಆಸಿಂ ಮನೆಗೆ ಓಡಿ ಬಂದಿದ್ದಾನೆ. ಆಗ ದುಷ್ಕರ್ಮಿ ಆಸಿಂಗೂ ಚಾಕುವಿನಿಂದ ಚುಚ್ಚಿ ಸಾಯಿಸಿದ್ದಾನೆ. ನಾಲ್ವರನ್ನೂ ಸಾಯಿಸಿ ದುಷ್ಕರ್ಮಿ ಹೊರಬಂದಿದ್ದು, ಈ ವೇಳೆ ಪಕ್ಕದ ಮನೆಯ ಹುಡುಗಿ ಮನೆಯಿಂದ ಹೊರಬಂದಿದ್ದಾಳೆ. ಈ ವೇಳೆ ದುಷ್ಕರ್ಮಿ ಆಕೆಯನ್ನು ಹೆದರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.

 

Share Post