CrimeDistricts

ಮಹಿಳೆಯ ಮೇಲೆ ಕಾಡಾನೆ ದಾಳಿ; ತಲೆಯನ್ನು ತುಳಿದ ಭೀಕರವಾಗಿ ಸಾಯಿಸಿದ ಸಲಗ

ಚಿಕ್ಕಮಗಳೂರು; ಕಾಡಾನೆಯೊಂದು ಮಹಿಳೆಯೊಬ್ಬರನ್ನು ಭೀಕರವಾಗಿ ತುಳಿದು ಸಾಯಿಸಿದೆ. ಆಲ್ದೂರು ಬೀಲಿಯ ಹಡೆಯೂರು ಗ್ರಾಮದ ತೋಟದ ಬಳಿ ಈ ದುರ್ಘಟನೆ ನಡೆದಿದೆ. ನಲವತ್ತೈದು ವರ್ಷದ ವೀಣಾ ಎಂಬುವವರೇ ಕಾಡಾನೆ ದಾಳಿಗೆ ಸಾವಿಗೀಡಾದ ಮಹಿಳೆಯಾಗಿದ್ದಾರೆ.

ವೀಣಾ ಅವರು ಕಾಫಿ ತೋಟದ ಕೆಲಸಕ್ಕೆಂದು ಹೋಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಆನೆ ದಾಳಿ ಮಾಡಿದೆ. ಮಹಿಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಸೊಂಡಿಲಿನಿಂದ ಹಿಡಿದು ಕೆಳಗೆಸೆದಿರುವ ಆನೆ, ಆಖೆಯ ತಲೆ ಮೇಲೆ ಕಾಲಿಟ್ಟು ತುಳಿದು ಭೀಕರವಾಗಿ ಸಾಯಿಸಿದೆ.

ಈ ಭಾಗದಲ್ಲಿ ಕೆಲ ದಿನಗಳಿಂದ ಏಳು ಆನೆಗಳು ಬೀಡುಬಿಟ್ಟಿದ್ದವು. ಕಾಫಿ ತೋಟಗಳಲ್ಲಿ ಆನೆಗಳು ಕಾಣಿಸಿಕೊಳ್ಳುತ್ತಿದ್ದವು. ಇದರಿಂದಾಗಿ ಸಾರ್ವಜನಿಕರು ಆತಂಕದಿಂದಲೇ ಓಡಾಡುತ್ತಿದ್ದರು. ಕಳೆದ ಎರಡು ತಿಂಗಳಲ್ಲಿ ಕಾಡಾನೆಗೆ ಇದು ಎರಡನೇ ಸಾವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಬೇರೆಡೆ ಓಡಿಸಬೇಕೆಂದು ಸಾರ್ವನಿಕರು ಆಗ್ರಹಿಸುತ್ತಿದ್ದಾರೆ.

ಶಾಸಕಿ ನಯನಾ ಮೋಟಮ್ಮ ಅವರು ಸ್ಥಳಕ್ಕಾಗಮಿಸಿದ್ದು, ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

Share Post