Lifestyle

ಆರ್ಥಿಕ ಸಂಕಷ್ಟಗಳಿಂದ ಪಾರಾಗಲು ಈ ಮಂತ್ರಗಳನ್ನು ಪಠಿಸಿ

ಆಂಜನೇಯ ದೇವರು  ಧೈರ್ಯ, ಶಕ್ತಿ ಮತ್ತು ಬುದ್ಧಿವಂತಿಕೆಯ ಸಂಕೇತ. ಇವರು ನಮ್ಮ ಆರ್ಥಿಕ ಸಂಕಷ್ಟಗಳನ್ನೂ ತೀರಿಸುತ್ತಾರಂತೆ. ಇವರ ಮಂತ್ರಗಳನ್ನು ಜಪಿಸಿದರೆ ಆರ್ಥಿಕ ನಷ್ಟದಿಂದ ಪಾರಾಗಬಹುದು. ಜೊತೆಗೆ ಧೈರ್ಯವೂ ನಮ್ಮದಾಗುತ್ತದೆ. ಆಂಜನೇಯಸ್ವಾಮಿಗೆ ಸಂಬಂಧಿಸಿದ ಮೂರು ಮಂತ್ರಗಳನ್ನು ಭಕ್ತಿಯಿಂದ ಜಪಿಸಿದರೆ ಆರ್ಥಿಕ ನಷ್ಟದಿಂದ ಪಾರಾಗಬಹುದು. ಆ ಮಂತ್ರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

ಓಂ ಹನುಮತೇ ನಮಃ

ಪ್ರತಿದಿನ ಈ ಮಂತ್ರವನ್ನು ಜಪಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬರುತ್ತದೆ. ಈ ಆಂಜನೇಯ ಮೂಲ ಮಂತ್ರವನ್ನು ಆರ್ಥಿಕ ಸ್ಥಿರತೆಗಾಗಿಯೂ ಬಳಸಲಾಗುತ್ತದೆ. ಈ ಮಂತ್ರವನ್ನು ಕಾರ್ಯ ಸಿದ್ಧಿ ಮಂತ್ರ ಎಂದೂ ಕರೆಯುತ್ತಾರೆ. ನೀವು ಯಾವುದೇ ಪ್ರಮುಖ ಕೆಲಸವನ್ನು ಪ್ರಾರಂಭಿಸುವ ಮೊದಲು ಈ ಮಂತ್ರವನ್ನು ಹಲವಾರು ಬಾರಿ ಪಠಿಸಿದರೆ ನಿಮಗೆ ಶುಭವಾಗುತ್ತದೆ.

ಓಂ ಶ್ರೀ ವಜ್ರದೇಹಾಯ ರಾಮಭಕ್ತ್ಯಾ ವಾಯುಪುತ್ರಾಯ ನಮೋಸ್ತುತೇ!

ಉತ್ತಮ ವೃತ್ತಿಜೀವನದಲ್ಲಿ ನೆಲೆಗೊಳ್ಳಲು ಈ ಮಂತ್ರವು ಉಪಯುಕ್ತವಾಗಿದೆ. ಈ ಮಂತ್ರವು ತಮ್ಮ ಪ್ರಸ್ತುತ ಕೆಲಸದಲ್ಲಿ ಸಂತೋಷವಾಗಿರಲು ಅಥವಾ ಬೇರೆ ಉದ್ಯೋಗವನ್ನು ಹುಡುಕುತ್ತಿರುವ ನಿರುದ್ಯೋಗಿಗಳಿಗೆ ತುಂಬಾ ಉಪಯುಕ್ತವಾಗಿದೆ. ಗುರುವಾರ ಬೆಳಗ್ಗೆ 11 ಬಾರಿ ಈ ಮಂತ್ರಗಳನ್ನು ಪಠಿಸುವುದು ಒಳ್ಳೆಯದು.

ಹ್ಹ ಹನುಮತೇ ರುದ್ರತಮ್ಕೈ ಹಾಹಾ ಫಟಾ!

ಈ ಶಕ್ತಿಯುತ ಮಂತ್ರವನ್ನು ಆಂಜನೇಯ ರುದ್ರಮಂತ್ರ ಎಂದು ಕರೆಯಲಾಗುತ್ತದೆ. ಇದು ಕೆಲವೇ ಜನರಿಗೆ ತಿಳಿದಿದೆ. ಇಷ್ಟಾರ್ಥಗಳನ್ನು ತಕ್ಷಣವೇ ಪೂರೈಸುವ ಮಂತ್ರ ಎಂದು ಹೇಳಲಾಗುತ್ತದೆ. ಇದು ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಮತ್ತು ವ್ಯಕ್ತಿಯನ್ನು ಬಲಶಾಲಿಯಾಗಿಸುವ ಮಂತ್ರವಾಗಿದೆ.

Share Post