BengaluruCrime

ಹುಲಿ ಉಗುರಿನ ಲಾಕೆಟ್‌ ವಿಚಾರ; ಹೈಕೋರ್ಟ್‌ ಮೊರೆಹೋದ ರಾಜ್ಯಸಭಾ ಸದಸ್ಯ ಜಗ್ಗೇಶ್‌

ಬೆಂಗಳೂರು; ಹುಲಿ ಉಗುರಿನ ಲಾಕೆಟ್‌ ಇರುವ ಬಗ್ಗೆ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರು ಸ್ವತಃ ಹೇಳಿಕೊಂಡಿದ್ದ ವಿಡಿಯೋ ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಅವರ ನಿವಾಸದ ಮೇಲೆ ದಾಳಿ ಮಾಡಿದ್ದರು. ಇದನ್ನು ಪ್ರಶ್ನೆ ಮಾಡಿ ಜಗ್ಗೇಶ್‌ ಕೋರ್ಟ್‌ ಮೊರೆ ಹೋಗಿದ್ದಾರೆ.

ಹುಲಿ ಉಗುರಿನ ಲಾಕೆಟ್‌ ಇರುವ ಬಗ್ಗೆ ಉತ್ತರ ನೀಡುವಂತೆ ನನಗೆ ಅರಣ್ಯ ಇಲಾಖೆ ಅಧಿಕಾರಿಗಳು ನನಗೆ ನೋಟಿಸ್‌ ನೀಡಿದ್ದರು. ಆ ನೋಟಿಸ್‌ಗೆ ನಾನು ಉತ್ತರ ನೀಡಬೇಕಿತ್ತು. ಆದ್ರೆ ಉತ್ತರ ನೀಡುವ ಮೊದಲೇ ದಾಳಿ ಮಾಡಿದ್ದಾರೆ. ಪರಿಶೀಲನೆ ನೆಪದಲ್ಲಿ ಮನೆಯ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾರೆ ಎಂದು ಜಗ್ಗೇಶ್‌ ಆರೋಪ ಮಾಡಿದ್ದಾರೆ. ಅರಣ್ಯಾಧಿಕಾರಿಗಳ ದಾಳಿ ಕಾನೂನು ಬಾಹಿರ. ಹೀಗಾಗಿ ಅವರ ವಿರುದ್ಧ ಕ್ರಮ ಆಗಬೇಕು. ಕೊಟ್ಟಿರುವ ನೋಟಿಸ್‌ ರದ್ದು ಮಾಡಬೇಕು ಎಂದು ಜಗ್ಗೇಶ್‌ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

Share Post