InternationalNational

ಇಸ್ರೇಲ್‌ನಿಂದ ಬಂತು ಮತ್ತೊಂದು ವಿಮಾನ; 9 ಕನ್ನಡಿಗರು ಸೇರಿ 235 ಮಂದಿ ಆಗಮನ

ದೆಹಲಿ; ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ನಡುವೆ ಯುದ್ಧ ನಡೆಯುತ್ತಿದೆ. ಹೀಗಾಗಿ ಇಸ್ರೇಲ್‌ನಲ್ಲಿ ನೆಲೆಸಿರುವ ಸಾವಿರಾರು ಭಾರತೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ನಿನ್ನೆ ಒಂದು ವಿಮಾನದಲ್ಲಿ ಸುರಕ್ಷಿತವಾಗಿ ಭಾರತೀಯರನ್ನು ಕರೆತರಲಾಗಿತ್ತು. ಇಂದೂ ಕೂಡಾ ಮತ್ತೊಂದು ವಿಮಾನ ಸುರಕ್ಷಿತವಾಗಿ ದೆಹಲಿಗೆ ಬಂದಿಳಿದಿದೆ.

ಎರಡನೇ ವಿಮಾನದಲ್ಲಿ 235 ಭಾರತೀಯರು ಆಗಮಿಸಿದ್ದಾರೆ. ಇದರಲ್ಲಿ 9 ಮಂದಿ ಕನ್ನಡಿಗರಿದ್ದಾರೆ. ಈಗಾಗಲೇ ಆಪರೇಷನ್ ಅಜಯ್ ಕಾರ್ಯಾಚರಣೆ ಮೊದಲ ಹಂತದಲ್ಲಿ 212 ಮಂದಿಯನ್ನು ಭಾರತಕ್ಕೆ ಕರೆತರಲಾಗಿದೆ. ಎರಡನೇ ಏರ್‌ಲಿಫ್ಟ್‌ನಲ್ಲಿ 235 ಮಂದಿ ಆಗಮಿಸಿದ್ದಾರೆ. AI 506 ವಿಮಾನದಲ್ಲಿ ಇವರನ್ನೆಲ್ಲಾ ಕರೆತರಲಾಗಿದೆ.

 

Share Post