CrimeDistricts

ಕಿಡಿಗೇಡಿಗಳು ಕೃತ್ಯಕ್ಕೆ ಎರಡು ಎಕರೆ ಟೊಮ್ಯಾಟೋ ಬೆಳೆ ನಾಶ

ಚಾಮರಾಜನಗರ; ಈಗಿನ್ನೂ ಫಸಲಿಗೆ ಬಂದಿದ್ದ ಎರಡು ಎಕರೆ ಟೊಮ್ಯಾಟೋ ಬೆಳೆಯನ್ನು ಕಿಡಿಗೇಡಿಗಳು ನಾಶ ಮಾಡಿರುವ ದಾರುಣ ಘಟನೆ ಚಾಮರಾಜನಗರ ತಾಲೂಕಿನ ಬೇಗೂರು ಪೋಲಿಸ್ ಠಾಣಾ ವ್ಯಾಪಿಯ ಕೆಬ್ಬೆಪುರ ಗ್ರಾಮದಲ್ಲಿ ನಡೆದಿದೆ

ಗ್ರಾಮದ ಮಂಜು ಎಂಬುವವರು ತಮ್ಮ ಜಮೀನಿನಲ್ಲಿ ಎರಡು ಎಕರೆಯಲ್ಲಿ ಟೊಮೊಟೋ ಬೆಳೆ ಬೆಳೆದಿದ್ದರು. ನಿನ್ನೆ ಮೊದಲ ಫಸಲನ್ನು ಕ್ಯುಯ್ದು ಮಾರುಕಟ್ಟೆಗೆ ಹಾಕಿ ಸಂತಸದಿಂದ ಇದ್ದರು. ಆದರೆ ನಿನ್ನೆ ರಾತ್ರಿ ಅಪರಿಚಿತ ಕಿಡಿಗೇಡಿಗಳು ಟೊಮೊಟೊ ಬೆಳೆ ಮೇಲೆ ದಾಳಿ ಮಾಡಿದ್ದು, ಟೊಮೊಟೋ ಗಿಡಗಳನ್ನು ನೆಲದ ಸಮಕ್ಕೆ ಕ್ಯುಯ್ದು ಹಾಳು ಮಾಡಿದ್ದಾರೆ.

ಇನ್ನು ಕೆಲವು ಗಿಡಗಳಿಗೆ ಕಟ್ಟಿದ್ದ ತಂತಿಯನ್ನು ಕಿತ್ತುಹಾಕಿ ನೆಲಸಮ ಮಾಡಿ ಬೆಳೆ ನಾಶ ಮಾಡಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಟೊಮೊಟೋ ಗಿಡ ಹಾಕಲು ಮಂಜು ಅವರು ಸುಮಾರು ಎರಡು ಲಕ್ಷ ರೂ. ಗಿಂತ ಹೆಚ್ಚು ಖರ್ಚು ಮಾಡಿದ್ದರು. ಆದರೆ ಫಸಲಿಗೆ ಬಂದಿದ್ದ ಟೊಮೊಟೋ ಬೆಳೆ ನಾಶವಾಗಿರುವುದರಿಂದ ಅಂದಾಜು 10 ಲಕ್ಷ ರೂ. ನಷ್ಟವಾಗಿದೆ. ಫಸಲಿಗೆ ಬಂದಿದ್ದ ಟೊಮೊಟೋ ಬೆಳೆ ನಾಶವಾಗಿರುವುದರಿಂದ ರೈತ ಮಂಜು ಕಂಗಲಾಗಿದ್ದಾರೆ.

ಬೇಗೂರು ಪೋಲಿಸ್ ಭೇಟಿ ಪರಿಶೀಲನೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Share Post