CrimeNational

ರೈಲಿನಲ್ಲಿ ಗುಂಡು ಹಾರಿಸಿದ ಆರ್‌ಪಿಎಫ್‌ ಪೇದೆ; ನಾಲ್ವರು ದುರ್ಮರಣ

ಜೈಪುರ; ಆರ್‌ಪಿಎಫ್‌ ಪೇದೆಯೊಬ್ಬರು ರೈಲಿನಲ್ಲಿ ಗುಂಡು ಹಾರಿಸಿದ್ದು, ಆರ್‌ಪಿಎಫ್‌ ಸಬ್‌ಇನ್ಸ್‌ಪೆಕ್ಟರ್‌ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್‌ ರೈಲು ನಿಲ್ದಾಣದ ಬಳಿ ಈ ಕೃತ್ಯ ಎಸಗಲಾಗಿದೆ.

ಜೈಪುರ-ಮುಂಬೈ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಕೃತ್ಯ ಎಸಗಲಾಗಿದೆ. ಇಂದು ಬೆಳಗಿನಜಾವ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರೈಲ್ವೆ ರಕ್ಷಣಾ ಪಡೆ ಪೇದೆಯೊಬ್ಬ, ಸಬ್‌ಇನ್ಸ್‌ಪೆಕ್ಟರ್‌ ಜೊತೆ ಜಗಳಕ್ಕಿಳಿದಿದ್ದ. ಇದು ತಾರಕಕ್ಕೇರಿದೆ. ಈ ವೇಳೆ ಪ್ರಯಾಣಿಕರು ಕೂಡಾ ಮಧ್ಯೆಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡ ಪೇದೆ ಗುಂಡು ಹಾರಿಸಿದ್ದಾನೆ.

ಈ ವೇಳೆ ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಇತರ ಮೂವರು ಗುಂಡಿಗೆ ಬಲಿಯಾಗಿದ್ದಾರೆ. ಆರೋಪಿ ಆರ್‌ಪಿಎಫ್ ಪೇದೆ ಚೇತನ್ ಸಿಂಗ್ ಎಂದು ತಿಳಿದುಬಂದಿದೆ. ಘಟನೆ ನಂತರ ಪರಾರಿಯಾಗಲು ಯತ್ನಿಸಿದ ಆತನನ್ನು ಪೊಲೀಸರು ಬಂಧಿಸಿದ್ದಾರೆ.

Share Post