CrimeNational

ಹಾವಿನಿಂದ ಕಚ್ಚಿಸಿ ಉದ್ಯಮಿಯನ್ನು ಕೊಲೆ ಮಾಡಿದರು; ನಂತರ ಏನಾಯ್ತು ಗೊತ್ತಾ..?

ಡೆಹ್ರಾಡೂನ್; ಹಾವು ಕಚ್ಚಿ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದರು. ಪೊಲೀಸರು ಕೂಡಾ ಅದನ್ನು ಹಾವು ಕಚ್ಚಿ ಸತ್ತ ಪ್ರಕರಣವೆಂದೇ ನಂಬಿದ್ದರು. ಆದ್ರೆ ಕೊನೆಗೆ ಗೊತ್ತಾಗಿದ್ದು, ಕಚ್ಚಿದ್ದೇನೋ ನಿಜ. ಆದ್ರೆ ಅದು ಅಚಾನಕ್ಕಾಗಿ ಕಚ್ಚಿದ್ದಲ್ಲ, ಹಾವು ತಂದು ಕಚ್ಚಿಸಲಾಗಿದೆ ಅನ್ನೋದು ಗೊತ್ತಾಗಿದೆ. ಈ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈ ಘಟನೆ ನಡೆದಿರೋದು ಉತ್ತರಾಖಂಡದಲ್ಲಿ. ನಾಲ್ವರ ವಿರುದ್ಧ ಕೇಸ್‌ ದಾಖಲಾಗಿದ್ದು, ಉಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶ ಮೂಲದ ಹಾವಾಡಿಗ ರಮೇಶ್‍ನಾಥ್ ಎಂಬಾತನೇ ಹಾವು ಬಿಟ್ಟು ಕೊಲೆ ಮಾಡಿದ ವ್ಯಕ್ತಿ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಡಾಲಿ ಆರ್ಯ ಹಾಗೂ ಆಕೆಯ ಸ್ನೇಹಿತ ದೀಪ್ ಕಂಡ್ಪಾಲ್ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.

ಜುಲೈ 15 ರಂದು ತೀನ್‍ಪಾನಿ ಪ್ರದೇಶದ ಬಳಿ ಅಂಕಿತ್ ಚೌಹಾಣ್ (30) ಎಂಬಾತ ಸಾವನ್ನಪ್ಪಿದ್ದ. ಕಾರಿನೊಳಗೆ ಆತನ ಶವ ಪತ್ತೆಯಾಗಿತ್ತು. ಆ ದೇಹವನ್ನು ಪರೀಕ್ಷೆಗೊಳಪಡಿಸಿದಾಗ ಹಾವಿನ ವಿಷ ದೇಹದಲ್ಲಿ ಸೇರಿರುವುದು ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಆತನ ಮೊಬೈಲ್ ಪರಿಶೀಲಿಸಿದಾಗ ಡಾಲಿ ಎಂಬ ಮಹಿಳೆಯೊಂದಿಗೆ ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು.

ಡಾಲಿ ಎಂಬಾಕೆ ಹಾವಾಡಿಗನಿಗೆ ಸುಪಾರಿ ಕೊಟ್ಟು ಹಾವಿನಿಂದ ಕಚ್ಚಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

 

Share Post