CrimeNational

ಮೂವರು ಮಕ್ಕಳ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನ

ಲಕ್ನೋ; ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರು ಪುಟಾಣಿ ಮಕ್ಕಳ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿರುವ ಪೈಶಾಚಿಕ ಕೃತ್ಯ ನಡೆದಿದೆ. ಉತ್ತರ ಪ್ರದೇಶದ ಲಖನೌನಲ್ಲಿ ಈ ದುರ್ಘಟನೆ ನಡೆದಿದ್ದು, ಅದೃಷ್ಟವಶಾತ್‌ ಮೂವರೂ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಒಂದು ಚಿಕ್ಕ ಮಗು ಹಾಗೂ ಇಬ್ಬರು ಹುಡುಗರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಸ್ವಿಫ್ಟ್‌ ಡಿಸೈರ್‌ ಕಾರು ಏಕಾಏಕಿ ಮಕ್ಕಳ ಮೇಲೆ ನುಗ್ಗಿದೆ. ಆದ್ರೆ ದೇವರು ದೊಡ್ಡವನು, ಮೂವರು ಮಕ್ಕಳು ಬದುಕುಳಿದಿದ್ದಾರೆ. ಇನ್ನು ಘಟನೆಯ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗೋವಿಂದ್‌ ಯಾದವ್‌ ಎಂಬಾತನೇ ಆರೋಪಿ. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಬೇಕಂತಲೇ ಡ್ರೈವರ್‌ ಈ ಕೆಲಸ ಮಾಡಿದ್ದಾನೆ ಎಂಬುದು ಖಾತ್ರಿಯಾಗಿದೆ.

ಆರೋಪಿ ಗೋವಿಂದ್‌ ಯಾದವ್‌ಗೂ ಮಕ್ಕಳ ತಂದೆಯೂ ವೈಯಕ್ತಿಕ ದ್ವೇಷ ಇತ್ತು. ಈ ಕಾರಣಕ್ಕಾಗಿ ಆತ ಮಕ್ಕಳ ಮೇಲೆ ಕಾರು ಹತ್ತಿಸಿದ್ದಾನೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

 

Share Post