BengaluruPolitics

ಡಿ.ಕೆ.ಶಿವಕುಮಾರ್‌ ಅವರು ಕೊತ್ವಾಲ್‌ ಅವರನ್ನು ಮೀಟ್‌ ಆಗಿದ್ದರಾ..?

ಬೆಂಗಳೂರು; ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ರೌಡಿಗಳ ಸಂಪರ್ಕ ಇತ್ತು ಎಂದು ಕೆಲವರು ಆರೋಪಿಸುತ್ತಿರುತ್ತಾರೆ. ಈ ವಿಚಾರ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಪ್ರಸ್ತಾಪವಾಗಿದೆ. 

ಪರಮೇಶ್‌ ಎನ್ನುವವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.  ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಕೆಲವರು ಏನೇನೋ ಮಾತನಾಡುತ್ತಾರೆ. ರೌಡಿಗಳ ಸಂಪರ್ಕ ಇತ್ತು, ಅವರು ರೌಡಿ ಎಂದೆಲ್ಲಾ ಮಾತನಾಡುತ್ತಾರೆ. ಆದ್ರೆ ಅದೆಲ್ಲವೂ ಸುಳ್ಳು ಎಂದು ಪರಮೇಶ್‌ ಹೇಳಿದ್ದಾರೆ.

ಜನರಲ್ ಹಾಸ್ಟೆಲ್‌ ನಲ್ಲಿ ಎಲ್.ಎನ್. ಮೂರ್ತಿ ಅವರು ಇರುತ್ತಿದ್ದರು. ನಾವೆಲ್ಲಾ ಅವರನ್ನು ಭೇಟಿ ಮಾಡೋಕೆ ಅಂತಾ ಹೋಗ್ತಾ ಇದ್ವಿ. ಆಗಾಗ ಅಲ್ಲಿಗೆ ಕೊತ್ವಾಲ್ ಕೂಡಾ ಬರ್ತಾ ಇದ್ದರು. ಆಗ ಅವರು ನಮ್ಮನ್ನು ಮಾತನಾಡಿಸುತ್ತಿದ್ದರು. ಅವರೇ ನಮಗೆ ಹೇಳ್ತಾ ಇದ್ರು. ನೀವು ನಾಯಕರಾಗುವವರು, ನಮ್ಮಂಥವರೊಟ್ಟಿಗೆ ಕಾಣಿಸಿಕೊಳ್ಳಬೇಡಿ ಎನ್ನುತ್ತಿದ್ದರು ಎಂದು ಹೇಳುತ್ತಿದ್ದರು ಎಂದು ಹಳೇ ಘಟನೆಗಳನ್ನು ಮೆಲುಕು ಹಾಕಿದ್ದಾರೆ.

 

Share Post