BengaluruPolitics

ನಾವೂ ಬಿಜೆಪಿಯವರ ವಿರುದ್ಧ ಅಭಿಯಾನ ಮಾಡಬೇಕಾಗುತ್ತೆ; ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು; ‌ಬಿಜೆಪಿಯವರು ವಿದೇಶದಲ್ಲಿರುವ ಕಪ್ಪು ಹಣ ತಂದು ಜನರ ಅಕೌಂಟಿಗೆ ಹಾಕುತ್ತೇವೆ ಅಂದಿದ್ದರು. ಆದ್ರೆ ಹಾಕಲೇ ಇಲ್ಲ. ಈಗ ನಾವೂ ಕೂಡಾ ಅಭಿಯಾನ ಶುರು ಮಾಡಬೇಕಾಗುತ್ತದೆ ಎಂದು ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್‌ ಆಕ್ರೋಶ ಹೊರಹಾಕಿದ್ದಾರೆ.

ಶಕ್ತಿ ಯೋಜನೆಗೆ ಚಾಲನೆ ನೀಡುವ ಮೊದಲ ಮಾತನಾಡಿದ ಅವರು, ನಾವು ಬಸವಣ್ಣನ ನಾಡಿನಲ್ಲಿ ಜೀವನ ಮಾಡುತ್ತಿದ್ದೇವೆ. ನುಡಿದಂತೆ ನಡೆಯುವ ಪಕ್ಷ ನಮ್ಮದು. ಯಾವತ್ತಿದ್ದರೂ ಟೀಕೆಗಳು ಸತ್ತು ಹೋಗುತ್ತವೆ. ಮಾಡಿರೋ ಕೆಲಸಗಳಷ್ಟೇ ಉಳಿಯೋದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ವಿರೋಧ ಪಕ್ಷಗಳು ಸುಮ್ಮನೆ ಟೀಕೆ ಮಾಡಬೇಕು ಅಂತ ಟೀಕೆ ಮಾಡುತ್ತಿವೆ. ಹೀಗಾಗಿ ಅವರನ್ನು ತಿದ್ದೂ ಕೆಲಸ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಇದೇ ವೇಳೆ ಹೇಳಿದರು.

Share Post