BengaluruPolitics

ಗ್ಯಾರೆಂಟಿಗಳು ಜಾರಿ; ಆದ್ರೆ ಷರತ್ತುಗಳು ಅನ್ವಯಿಸುತ್ತವೆ!; ಸಿಎಂ ಹೇಳಿದ್ದೇನು..?

ಬೆಂಗಳೂರು; ನಾವು ಐದು ಗ್ಯಾರೆಂಟಿಗಳನ್ನು ಜಾರಿ ಮಾಡೋದಾಗಿ ಹೇಳಿದ್ವಿ. ಅವುಗಳನ್ನು ಇದೇ ಆರ್ಥಿಕ ವರ್ಷದಲ್ಲಿ ಜಾರಿ ಮಾಡಲು ತೀರ್ಮಾನ ಮಾಡಿದ್ದೇವೆ. ಷರತ್ತುಗಳೊಂದಿಗೆ ಈ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಂಪುಟ ಸಭೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಯೋಜನೆಗಳು ಹಾಗೂ ಅದರ ಮೇಲಿನ ಷರತ್ತುಗಳ ಬಗ್ಗೆ ವಿವರಣೆ ನೀಡಿದ್ದಾರೆ. 

ಗ್ಯಾರೆಂಟಿ ನಂಬರ್‌ ವನ್‌ – ಗೃಹಜ್ಯೋತಿ – 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌

– ಇದಕ್ಕೆ ಹಿಂದಿನ ಒಂದು ವರ್ಷದಲ್ಲಿ ಒಟ್ಟು ಎಷ್ಟು ಯೂನಿಟ್‌ ವಿದ್ಯುತ್‌ ಬಳಸಿದ್ದಾರೆ ಎಂದು ಲೆಕ್ಕ ಹಾಕಲಾಗುತ್ತದೆ. ಅದರಲ್ಲಿ ಸರಾಸರಿ ಎಷ್ಟು ಬರುತ್ತದೋ ಅದಕ್ಕಿಂತ ಹತ್ತು ಪರ್ಸೆಂಟ್‌ವರೆಗೆ ಹೆಚ್ಚು ವಿದ್ಯುತ್‌ ಬಳಸಬಹುದು

– ಸರಾಸರಿಗಿಂತ ಹೆಚ್ಚು ವಿದ್ಯುತ್‌ ಬಳಸಿದರೆ ಹಣ ಪಾವತಿ ಮಾಡಬೇಕಾಗುತ್ತದೆ

-ವಿದ್ಯುತ್‌ ದುರ್ಬಳಕೆ ಮಾಡದಂತೆ ತಡೆಯಲು ಈ ಷರತ್ತು ವಿಧಿಸಲಾಗಿದೆ

–  ಜೂನ್‌ ತಿಂಗಳ ವಿದ್ಯುತ್‌ ಬಿಲ್‌ ಪಾವತಿ ಮಾಡಬೇಕು. ಜುಲೈನಿಂದ ವಿದ್ಯುತ್‌ ಫ್ರೀ. ಇದುವರೆಗೆ ಇರುವ ಬಾಕಿಯನ್ನು ಕಟ್ಟಲೇಬೇಕಾಗುತ್ತದೆ

 

ಗ್ಯಾರೆಂಟಿ ನಂಬರ್‌ ಟು – ಗೃಹ ಲಕ್ಷ್ಮೀ – ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ

– ಜೂನ್‌ 15 – ಜುಲೈ 15ರವರೆಗೆ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕು

– ಜುಲೈ 15 – ಆಗಸ್ಟ್‌ 15ರವರೆಗೆ ಪರಿಶೀಲನೆ ಮಾಡಿ, ಆಗಸ್ಟ್‌ 15 ರಿಂದ ಯೋಜನೆ ಜಾರಿ

– ಮನೆಯ ಒಡತಿ ಅಕೌಂಟ್‌ ನಂಬರ್‌ ಹಾಗೂ ಆಧಾರ್‌ ಕಾರ್ಡ್‌ ಇತರೆ ಮಾಹಿತಿ ನೀಡಬೇಕು

-ಆಗಸ್ಟ್‌ 15ರಂದು ಮೊದಲ ಕಂತನ್ನು ಎಲ್ಲರ ಅಕೌಂಟ್‌ಗಳಿಗೆ ಹಣ ಪಾವತಿ ಮಾಡುತ್ತೇನೆ

-ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ ಹೊಂದಿರುವ ಎಲ್ಲರಿಗೂ ಹಣ ನೀಡಲಾಗುತ್ತದೆ

-ಪೆನ್ಷನ್‌ ಪಡೆಯುತ್ತಿರುವವರು ಯಜಮಾನಿಯಾಗಿದ್ದರೆ ಪೆನ್ಷನ್‌ ಜೊತೆಗೆ ಈ 2 ಸಾವಿರ ರೂಪಾಯಿಯನ್ನೂ ಕೊಡುತ್ತೇವೆ (ಸೋಷಿಯಲ್‌ ಸೆಕ್ಯೂರಿಟಿ ಪೆನ್ಷನ್‌ ಪಡೆಯುತ್ತಿರುವವರು)

 

ಗ್ಯಾರೆಂಟಿ ನಂಬರ್‌ ತ್ರೀ – ಅನ್ನಭಾಗ್ಯ – ಬಿಪಿಎಲ್‌ ಕಾರ್ಡ್‌ದಾರರಿಗೆ ಹತ್ತು ಕೆಜಿ ಅಕ್ಕಿ

-ಈ ತಿಂಗಳು ವಿತರಣೆಯಾಗಿದೆ, ಹೀಗಾಗಿ ಜುಲೈ 1 ರಿಂದ ಬಿಪಿಎಲ್‌, ಅಂತ್ಯೋದಯ ಕಾರ್ಡ್‌ದಾರರಿಗೆ ಹತ್ತು ಅಕ್ಕಿ ಕೊಡುತ್ತೇವೆ

-ತಲಾ ಹತ್ತು ಕೆಜಿ ಆಹಾರ ಧಾನ್ಯಗಳನ್ನು ನೀಡುತ್ತೇವೆ

 

ಗ್ಯಾರೆಂಟಿ ನಂಬರ್‌ ಫೋರ್ – ಶಕ್ತಿ – ಈ ತಿಂಗಳು 11ಕ್ಕೆ ಚಾಲನೆ

-ಎಲ್ಲಾ ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ

-ರಾಜ್ಯದ ಒಳಗಡೆ ಎಸಿ ಬಸ್‌ ಬಿಟ್ಟು ಬೇರೆ ಯಾವುದೇ ಸರ್ಕಾರಿ ಬಸ್‌ನಲ್ಲಿ ಉಚಿತವಾದ ಪ್ರಯಾಣ ಮಾಡಬಹುದು

-ರಾಜ್ಯದ ಒಳಗಡೆ ಮಾತ್ರ ಪ್ರಯಾಣಕ್ಕೆ ಅವಕಾಶವಿದೆ

-ರಾಜ್ಯದ ನಾಗರಿಕಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ

-ಎಸಿ ಬಸ್‌, ಲಕ್ಸುರಿ ಬಸ್‌ ಹೊರತುಪಡಿಸಿ ಎಲ್ಲಾ ಬಸ್‌ಗಳಲ್ಲಿ ಪ್ರಯಾಣ ಉಚಿತ

-ಕರ್ನಾಟಕ ಸಾರಿಗೆ ಬಸ್‌ ಆಗಿದ್ದರೂ ಹೊರರಾಜ್ಯಕ್ಕೆ ಪ್ರಯಾಣಕ್ಕೆ ಉಚಿತವಿಲ್ಲ

-ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ ಎಲ್ಲಾ ಸರ್ಕಾರಿ ಬಸ್‌ಗಳಲ್ಲಿ ಉಚಿತ

-ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಗಂಡಸರಿಗೆ ಶೇ.50 ರಿಸರ್ವೇಷನ್‌ ಮಾಡುತ್ತೇವೆ

-ಬಿಎಂಟಿಸಿಯಲ್ಲಿ ಯಾವುದೇ ರಿಸರ್ವೇಷನ್‌ ಇರೋದಿಲ್ಲ

-ಮಂಗಳಮುಖಿಯರಿಗೂ ಬಸ್‌ ಪ್ರಯಾಣ ಉಚಿತ

 

ಗ್ಯಾರೆಂಟಿ ನಂಬರ್‌ ಫೋರ್ – ಯುವನಿಧಿ – ನಿರುದ್ಯೋಗಿಗಳಿಗೆ 3000 ಹಾಗೂ 1500 ರೂ

-2022-23ರಲ್ಲಿ ಪಾಸಾದ ಪದವೀಧರರು ಹಾಗೂ ಡಿಪ್ಲೋಮಾ ದಾರರಿಗೆ ಕ್ರಮವಾಗಿ ಪ್ರತಿ ತಿಂಗಳೂ 3 ಸಾವಿರ ಹಾಗೂ 1500 ರೂಪಾಯಿ ನೀಡಲಾಗುತ್ತದೆ

-24 ತಿಂಗಳವರೆಗೆ ಮಾತ್ರ ಈ ಹಣ ನೀಡಲಾಗುತ್ತದೆ

-ಇಷ್ಟರೊಳಗೆ ಯಾರಿಗಾದರೂ ಕೆಲಸ ಸಿಕ್ಕರೆ ಅವರಿಗೆ ಹಣ ನೀಡಲಾಗುತ್ತವುದಿಲ್ಲ

-180 ದಿನಗಳಾದರೂ ಉದ್ಯೋಗ ಸಿಗದಿದ್ದವರಿಗೆ ಈ ಯೋಜನೆ ಅನ್ವಯ

-ಈ ಪದವಿ ಪಡೆದ ಆರು ತಿಂಗಳ ನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು

 

Share Post