NationalPolitics

ಲೋಕಸಭೆಯಲ್ಲಿ ಗಡಿ ವಿವಾದದ ಚರ್ಚೆ; ಮಹಾ ಸಂಸದರಿಗೆ ಉದಾಸಿ ತಿರುಗೇಟು

ನವದೆಹಲಿ; ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಲೋಕಸಭಾ ಕಲಾಪದಲ್ಲಿ ಚರ್ಚೆ ನಡೆದಿದೆ. ಮಹಾರಾಷ್ಟ್ರ ಸಂಸದರು ಕರ್ನಾಟಕ ಸಿಎಂ ಬೊಮ್ಮಾಯಿ ನೀಡಿದ ಹೇಳಿಕೆಯನ್ನು ಖಂಡಿಸಿದ್ದಾರೆ. ಸಿಎಂ ಬೊಮ್ಮಾಯಿಯವರು ಮಹಾರಾಷ್ಟ್ರವನ್ನು ಇಬ್ಬಾಗ ಮಾಡುವ ಮಾತು ಆಡಿದ್ದಾರೆ. ಅದು ಸರಿಯಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕರ್ನಾಟಕದ ಹಾವೇರಿ ಸಂಸದ ಶಿವಕುಮಾರ್‌ ಉದಾಸಿ ತಿರುಗೇಟು ನೀಡಿದ್ದಾರೆ.

ಗಡಿ ವಿವಾದ ಸುಪ್ರೀಂನಲ್ಲಿದೆ. ಕೋರ್ಟ್‌ನಲ್ಲಿ ವಿವಾರಣೆ ನಡೆಯುತ್ತಿರುವಾಗ ಆ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬಾರದು. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬಾರದು ಎಂದು ಸ್ಪೀಕರ್‌ಗೆ ಮನವಿ ಮಾಡಿದರು. ಮಹಾರಾಷ್ಟ್ರದ ಸಂಸದರು ಭಾಷೆ, ಸಂಸ್ಕೃತಿ ವಿಚಾರದಲ್ಲಿ ಹವ್ಯಾಸಿ ಅಪರಾಧಿಗಳಾಗಿದ್ದಾರೆ ಎಂದು ಕುಟುಕಿದರು.

Share Post