NationalPolitics

ಸಿದ್ದು, ಡಿಕೆಶಿ ಜೊತೆಗಿನ ಸಭೆ ಮುಕ್ತಾಯ; ಮುಂದೇನು..?

ನವದೆಹಲಿ; ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಹೈಕಮಾಂಡ್‌ ಇಬ್ಬರಲ್ಲಿ ಯಾರಿಗೆ ಸಿಎಂ ಸ್ಥಾನ ಕೊಡೋದು ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿದೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಳಗ್ಗೆಯಿಂದ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ.

ಬೆಳಗ್ಗೆ ರಾಹುಲ್‌ ಗಾಂಧಿ ಜೊತೆ ಸಭೆ ನಡೆಸಿದ್ದ ಖರ್ಗೆ, ಸಂಜೆ ಒಂದು ಗಂಟೆ ಕಾಲ ಡಿ.ಕೆ.ಶಿವಕುಮಾರ್‌ರನ್ನು ಕರೆಸಿ ಮಾತನಾಡಿದ್ದರು. ಅನಂತರ ಸಿದ್ದರಾಮಯ್ಯ ಜೊತೆ ಒಂದೂವರೆ ಗಂಟೆ ಕಾಲ ಚರ್ಚೆ ಮಾಡಿದ್ದಾರೆ.

ಇಬ್ಬರೂ ನಾಯಕರು ಎಐಸಿಸಿ ಅಧ್ಯಕ್ಷರ ಮುಂದೆ ತಮ್ಮ ವಾದ ಮಂಡಿಸಿದ್ದಾರೆ. ಇನ್ನು ಹೈಕಮಾಂಡ್‌ ತಮ್ಮ ತೀರ್ಮಾನ ಮಾಡಬೇಕಿದೆ. ಇಂದು ರಾತ್ರಿಯೇ ಹೈಕಮಾಂಡ್‌ ತೀರ್ಮಾನ ಮಾಡಿ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆ ಇದೆ.

Share Post