CinemaDistrictsPolitics

SOMANNA; ಸುದೀಪ್‌ ನೋಡಲು ಮುಗಿಬಿದ್ದ ಜನ; ಜಾರಿಬಿದ್ದ ಸಚಿವ ಸೋಮಣ್ಣ

ಚಾಮರಾಜನಗರ; ನಟ ಸುದೀಪ್‌ ನೋಡಲು ಅಭಿಮಾನಿಗಳು ಮುಗಿಬಿದ್ದರಿಂದ ಪಕ್ಕದಲ್ಲೇ ನಿಂತಿದ್ದ ಸಚಿವ ಹಾಗೂ ಬಿಜೆಪಿ ವಿ.ಸೋಮಣ್ಣ ಜಾರಿಬಿದ್ದ ಘಟನೆ ನಡೆದಿದೆ. ಸೋಮಣ್ಣ ಅವರು ಚಾಮರಾಜನಗರ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದ್ದಾರೆ. ಅಲ್ಲಿ ಸೋಮಣ್ಣ ಪರ ಪ್ರಚಾರ ನಡೆಸಲು ಇಂದು ನಟ ಸುದೀಪ್‌ ಆಗಮಿಸಿದ್ದರು. ಸಂತೆಮರಹಳ್ಳಿಯಲ್ಲಿ ನಡೆಯುತ್ತಿದ್ದ ರೋಡ್‌ ಶೋ ವೇಳೆ ಈ ಘಟನೆ ನಡೆದಿದೆ.

ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ಸುದೀಪ್‌ ನಂತರ ಅಲ್ಲಿಂದ ಚಾಮರಾಜನಗರಕ್ಕೆ ತೆರಳಿದರು. ಚಾಮರಾಜನಗರದಲ್ಲಿ ಸುದೀಪ್‌ ಅವರು ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಸುದೀಪ್‌ರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಜನರನ್ನು ನಿಯಂತ್ರಿಸಲಾಗದೆ ಪೊಲೀಸರು ಪರದಾಡಬೇಕಾಯಿತು. ಜನರನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಲಘು ಲಾಠಿ ಪ್ರಹಾರ ಕೂಡಾ ನಡೆಸಿದರು.

ಇದೇ ವೇಳೆ ಅಭಿಮಾನಿಯೊಬ್ಬ ಕಾರಿನ ಮೇಲಿದ್ದ ಸುದೀಪ್‌ ಹತ್ತಿರ ಹೋಗಲು ಕಾರು ಹತ್ತಿದ್ದ. ಈ ವೇಳೆ ಆತ ಪಕ್ಕದಲ್ಲೇ ಇದ್ದ ಸೋಮಣ್ಣ ಅವರನ್ನು ಹಿಡಿದುಕೊಂಡಿದ್ದು, ಸೋಮಣ್ಣ ಜಾರಿಬಿದ್ದಿದ್ದಾರೆ. ಈ ವೇಳೆ ಬೌನ್ಸರ್‌ಗಳು ಸೋಮಣ್ಣರನ್ನು ಹಿಡಿದುಕೊಂಡು ಕೆಳಗಿಳಿಸಿದ್ದಾರೆ.

Share Post