DistrictsPolitics

120 ಸ್ಥಾನ ಸಾಕಾಗಲ್ಲ, 150 ಸ್ಥಾನ ಗೆಲ್ಲಬೇಕು; ಮಲ್ಲಿಕಾರ್ಜುನ ಖರ್ಗೆ

ಚಿಕ್ಕಮಗಳೂರು; ಸರಳ ಬಹುಮತಕ್ಕೆ 113 ಸ್ಥಾನ ಬೇಕು. ಆದ್ರೆ 120 ಸ್ಥಾನ ಗೆದ್ದರೂ, ಶಾಸಕರನ್ನು ಖರೀದಿ ಮಾಡುವ ಭೀತಿ ಇರುತ್ತದೆ. ಹೀಗಾಗಿ ನಾವು 150 ಸ್ಥಾನಗಳ ಟಾರ್ಗೆಟ್‌ ಇಟ್ಟುಕೊಂಡಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸರಳ ಬಹುಮತ ಬಂದರೆ ಶಾಸಕರನ್ನು ಖರೀದಿ ಮಾಡಿಬಿಡುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ಥಿರ ಸರ್ಕಾರದಿಂದ ಉತ್ತಮ ಆಡಳಿತ ನಡೆಸಲು ಸಾಧ್ಯವಾಗುತ್ತದೆ. ಹೀಗಾಗಿ ನಾವು 150 ಸ್ಥಾನಗಳ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದಂತಹ ಅಲೆ ಇದೆ ಎಂದು ಖರ್ಗೆ ತಿಳಿಸಿದ್ದಾರೆ. ಗೋವಾದಲ್ಲಿ ಕೂಡಾ ಶಾಸಕರ ಖರೀದಿಯಾಯಿತು. ಏರೆ ಬೇರೆ ರಾಜ್ಯಗಳಲ್ಲಿ ನಾವು ಇದನ್ನು ಕಾಣಬಹುದು. ರಾಜ್ಯದಲ್ಲಿ ಕೂಡಾ ಶಾಸಕರನ್ನು ಖರೀದಿ ಮಾಡಲಾಗಿತ್ತು. ಮತ್ತೆ ಅದೇ ನಡೆಯಬಾರದು ಅಂದ್ರೆ ಸ್ಪಷ್ಟ ಬಹುಮತ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ತಕ್ಷಣ ಅದರ ಎಲ್ಲ ‘ಖಾತರಿ’ಗಳಿಗೆ ಮೊದಲ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗುವುದು ಎಂದು ಖರ್ಗೆ ಇದೇ ವೇಳೆ ಭರವಸೆ ನೀಡಿದರು.

 

Share Post