DistrictsPolitics

ವರುಣಾ ಕ್ಷೇತ್ರ ವರ್ಣರಂಜಿತ; ಸಿದ್ದರಾಮಯ್ಯ ಪರ ಸ್ಟಾರ್‌ಗಳ ಕ್ಯಾಂಪೇನ್‌

ಮೈಸೂರು; ಇಂದು ವರುಣಾ ಕ್ಷೇತ್ರದ ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ. ಸಿನಿಮಾ ನಟ, ನಟಿಯರ ಕ್ಯಾಂಪೇನ್‌ನಿಂದ ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ಕಳೆ ಬರಲಿದೆ. ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಪರ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಹಾಗೂ ದುನಿಯಾ ವಿಜಿ ಪ್ರಚಾರ ನಡೆಸಲಿದ್ದಾರೆ.

ಇನ್ನು ಇವರ ಜೊತೆ ಗೀತಾ ಶಿವರಾಜ್‌ಕುಮಾರ್‌, ಮಾಜಿ ಶಾಸಕ ಮಧುಬಂಗಾರಪ್ಪ, ಶಾಸಕ ಜಮೀರ್‌ ಅಹ್ಮದ್‌ ಖಾನ್‌, ಯತೀಂದ್ರ ಸಿದ್ದರಾಮಯ್ಯ ಕೂಡಾ ಪ್ರಚಾರ ಮಾಡಲಿದ್ದಾರೆ. ಎಲ್ಲರೂ ರೋಡ್‌ ಶೋ ಮಾಡಲಿದ್ದು, ಸುಮಾರು 12 ಗ್ರಾಮಗಳಲ್ಲಿ ಈ ರೋಡ್‌ ಶೋ ಸಂಚರಿಸಲಿದೆ.

ರಾಂಪುರದಿಂದ ರೋಡ್‌ ಶೋ ಶುರುವಾಗಲಿದ್ದು, ಸಂಜೆಯವರೆಗೂ ಹಲವು ಗ್ರಾಮಗಳಲ್ಲಿ ಮತ ಶಿಕಾರಿ ನಡೆಯುತ್ತದೆ. ಗೊದ್ದನಪುರ, ಮರಳೂರು, ತಾಂಡವಪುರ, ಕೆಂಪಸಿದ್ದನಹುಂಡಿ, ಹುಳಿಮಾವು, ಹದಿನಾರು, ಹೊಸಕೋಟೆ, ಸುತ್ತೂರು, ಬಿಳಿಗೆರೆ, ನಗರ್ಲೆ, ಮಲ್ಲೂಪುರ ಗ್ರಾಮಗಳಲ್ಲಿ ರೌಂಡ್ಸ್​ ಹಾಕಲಿದ್ದಾರೆ.

Share Post