BengaluruPolitics

ಹಣ ಪಡೆದು ಬಿ ಫಾರ್ಮ್;‌ ಕಾಂಗ್ರೆಸ್‌ ವಿರುದ್ಧ ಬಿಜೆಪಿ ದೂರು

ಬೆಂಗಳೂರು; ಕಾಂಗ್ರೆಸ್‌ ನಾಯಕರು ತಲಾ ಎರಡು ಲಕ್ಷ ರೂಪಾಯಿ ಹಣ ಪಡೆದು ಬಿ ಫಾರ್ಮ್‌ ನೀಡಿದ್ದಾರೆ. ಹಣ ಪಡೆದು ಬಿ ಫಾರ್ಮ್‌ ನೀಡೋದು ಕಾನೂನಿನ ಪ್ರಕಾರ ಅಪರಾಧ. ಹೀಗಾಗಿ ಕಾಂಗ್ರೆಸ್‌ ಎಲ್ಲಾ 224 ಅಭ್ಯರ್ಥಿಗಳ ನಾಮಪತ್ರಗಳನ್ನೂ ತಿರಸ್ಕರಿಸಬೇಕೆಂದು ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೂರು ನೀಡಿದ್ದಾರೆ. 

ಬಿ ಫಾರ್ಮ್‌ ಕೊಡುವುದಕ್ಕೆ ಹಣ ಪಡೆಯುವ ಹಾಗಿಲ್ಲ. ಆದ್ರೆ ಕಾಂಗ್ರೆಸ್‌ ನಾಯಕರು ಹಣ ಪಡೆದು ಬಿ ಫಾರ್ಮ್‌ ನೀಡಿದ್ದಾರೆ. ಇದು ಕಾನೂನು ಬಾಹಿರವಾಗುತ್ತದೆ. ಇದು ಲಂಚ ಪಡೆದು ಬಿ ಫಾರ್ಮ್‌ ಪಡೆದಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಹೀಗಾಗಿ ಕಾಂಗ್ರೆಸ್‌ ಎಲ್ಲಾ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಬೇಕೆಂದು ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.

 

Share Post