DistrictsPolitics

ಹಾಸನದಲ್ಲಿ ಭವಾನಿ ಗೆಲ್ಲಲ್ಲ, ಶಕುನಿಗಳು ದಾರಿ ತಪ್ಪಿಸ್ತಿದ್ದಾರೆ; ಹೆಚ್ಡಿಕೆ

ಹುಬ್ಬಳ್ಳಿ; ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ಕೊಟ್ಟರೆ ಅವರು ಗೆಲ್ಲೋದಿಲ್ಲ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾನು ಹಾಸನದಲ್ಲಿ ನನ್ನದೇ ಆದ ರೀತಿಯಲ್ಲಿ ಸರ್ವೇ ಮಾಡಿಸಿದ್ದೇನೆ. ಇದರಲ್ಲಿ ಭವಾನಿಯವರು ಗೆಲ್ಲೋದಿಲ್ಲ ಅನ್ನೋದು ಗೊತ್ತಾಗಿದೆ ಎಂದು ಹೇಳಿದರು.ʼ

ಕೆಲವರು ಭವಾನಿ ರೇವಣ್ಣ ಹಾಗೂ ರೇವಣ್ಣ ಅವರು ಕುಟುಂಬದ ತಲೆ ಕೆಡಿಸಿದ್ದಾರೆ. ಅವರ ತಲೆ ತುಂಬುತ್ತಿರುವವರು ಯಾರು ಅನ್ನೋದು ನನಗೆ ಗೊತ್ತಿದೆ. ಕೆಲ ಶಕುನಿಗಳು ಗೌಡರ ಕುಟುಂಬವನ್ನು ಮುಗಿಸಲು ಈ ರೀತಿಯ ಸಂಚು ನಡೆಸಿದ್ದಾರೆ. ಆದ್ರೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡೋದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

 

Share Post