CrimeNational

ಆಂಧ್ರದಲ್ಲಿ ಮೂರಂತಸ್ತಿನ ಕಟ್ಟಡ ಕುಸಿತ; ಮೂವರ ದಾರುಣ ಸಾವು

ವಿಶಾಖಪಟ್ಟಣ; ಆಂಧ್ರಪ್ರದೇಶದಲ್ಲಿ ಹಬ್ಬದ ಮಾರನೇ ದಿನವೇ ದಾರುಣ ಘಟನೆಯೊಂದು ನಡೆದುಹೋಗಿದೆ. ಮೂರಂತಸ್ತಿನ ಕಟ್ಟಡ ಕುಸಿದುಬಿದ್ದಿದ್ದು, ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ವಿಶಾಖಪಟ್ಟಣಂನ ರಾಮಜೋಗಿ ಪೇಟಾದಲ್ಲಿ ಕಳೆದ ರಾತ್ರಿ ಈ ದುರಂತ ನಡೆದಿದೆ.

ಜಿಲ್ಲಾಧಿಕಾರಿ ಕಚೇರಿ ಬಳಿಯೇ ಈ ಕಟ್ಟಡವಿದ್ದು, ಹಳೆಯ ಕಟ್ಟಡವಾಗಿತ್ತು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅವಶೇಷ ತೆರವು ಕಾರ್ಯಾಚರಣೆ ಕೂಡಾ ಭರದಿಂದ ಸಾಗಿದೆ.

Share Post