BengaluruCrime

ದೊಣ್ಣೆಯಿಂದ ಹೊಡೆದು ತಂದೆಯಿಂದಲೇ ಮಗಳ ಕೊಲೆ

ಬೆಂಗಳೂರು; ಗಂಡನ ಮನೆಗೆ ಹೋಗದ ಮಗಳ ತಲೆಗೆ ದೊಣ್ಣೆಯಿಂದ ಹೊಡೆದು ತಂದೆಯೇ ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ನಡೆದಿದೆ. ಆಶಾ ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದು, ಆರೋಪಿ ತಂದೆ ರಮೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಆಶಾ ಮದುವೆ ಬಳಿಕ ಗಂಡನ ಜೊತೆ ಜಗಳ ಮಾಡಿಕೊಂಡು ತವರಿಗೆ ಬಂದಿದ್ದಳು. ಆದ್ರೆ ಎಷ್ಟೇ ತಿಳಿ ಹೇಳಿದರೂ ಆಕೆ ಗಂಡನ ಮನೆಗೆ ಹೋಗಿರಲ್ಲ. ಇದರಿಂದಾಗಿ ರಾತ್ರಿ ತಂದೆ ರಮೇಶ್‌ ಹಾಗೂ ಮಗಳು ಆಶಾ ನಡುವೆ ಜೋರು ಜಗಳವಾಗಿದೆ. ಈ ವೇಳೆ ಆಕ್ರೋಶಗೊಂಡ ತಂದೆ ರಮೇಶ್‌ ದೊಣ್ಣೆಯಿಂದ ಮಗಳಿಗೆ ಹೊಡೆದಿದ್ದಾರೆ. ಅದು ತಲೆಗೆ ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಆಶಾ ಮೃತಪಟ್ಟಿದ್ದಾಳೆ. ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share Post