CrimeNational

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ; ಇಂದು ಉಭಯ ಸಿಎಂಗಳ ಸಭೆ

ನವದೆಹಲಿ; ಕರ್ನಾಟಕ -ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ಇಂದು ಕೇಂದ್ರ ಗೃಹಸಚಿವರು ಸಭೆ ಕರೆದಿದ್ದಾರೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿರುವ ಅಮಿತ್‌ ಶಾ, ಮನಸ್ತಾಪ ಶಮನಗೊಳಿಸಲು ಪ್ರಯತ್ನಿಸಲಿದ್ದಾರೆ.

ಗಡಿ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಮಿತ್‌ ಶಾ ಅವರು ಗಡಿಯಲ್ಲಿ ಶಾಂತಿ ಕಾಪಾಡಲು ಎರಡೂ ರಾಜ್ಯಗಳ ಸಿಎಂಗಳನ್ನು ಕರೆದಿದ್ದಾರೆ. ಸಿಎಂ ಬೊಮ್ಮಾಯಿ ಇವತ್ತು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕದ ನಿಲುವೇನು ಎಂಬುದರ ಬಗ್ಗೆ ಬೊಮ್ಮಾಯಿಯವರು ಗೃಹಸಚಿವರಿಗೆ ಸ್ಪಷ್ಟನೆ ನೀಡಲಿದ್ದಾರೆ.

ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ವಿಚಾರಣೆ ಅಂತಿಮ ಹಂತದಲ್ಲಿರುವಾಗ ಗಡಿಯಲ್ಲಿ ವಿವಾದ ತಲೆದೋರಿದೆ. ಹೀಗಾಗಿ ಕೋರ್ಟ್‌ ಆದೇಶ ಬರುವವರೆಗೂ ಶಾಂತಿ ಕಾಪಾಡುವಂತೆ ಅಮಿತ್‌ ಶಾ ಎರಡೂ ಸಿಎಂಗಳಿಗೆ ಸೂಚನೆ ನೀಡಲಿದ್ದಾರೆ.

 

Share Post