CrimeNational

ಇಡಿ ಅಧಿಕಾರಿಗಳ ದಾಳಿ; ಮಾಜಿ ಉದ್ಯೋಗಿ ಮನೆಯಲ್ಲಿ 3 ಕೋಟಿ ರೂ. ಪತ್ತೆ

ರಾಂಚಿ; ಜಾರ್ಖಂಡ್‌ನಲ್ಲಿ ಇವತ್ತು ಇಡಿ ಅಧಿಕಾರಿಗಳು ಹಲವು ಕಡೆ ದಾಳಿ ಮಾಡಿದ್ದು, ಮೂರು ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಜಾರ್ಖಂಡ್ ಖನಿಜ ಅಭಿವೃದ್ಧಿ ನಿಗಮದ ಮಾಜಿ ಉದ್ಯೋಗಿ ಅಶೋಕ್ ಕುಮಾರ್ ಮತ್ತು ಎಹ್ಸಾನ್ ಅನ್ಸಾರಿ ಮನೆ ಮತ್ತು ಕಚೇರಿಗಳ ಮೇಲೆ ಈ ದಾಳಿ ನಡೆದಿದೆ.

ರಾಂಚಿ ಮತ್ತು ಹಜಾರಿಬಾಗ್‌ನಲ್ಲಿರುವ 14 ಸ್ಥಳಗಳಲ್ಲಿ ಈ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಇದೇ ವೇಳೆ ಅನ್ಸಾರಿ ಅವರ ಮನೆಯಲ್ಲಿ 3 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಈ ಹಣ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್‌ಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ.

Share Post