BengaluruCrime

ರೂಪಾ-ರೋಹಿಣಿ ವಿವಾದ; ಕೊಳಕು ಅಂತರ್ಯುದ್ಧ ನಿಲ್ಲಿಸಿ – ಸಿಎಂ ಸೂಚನೆ

ಬೆಂಗಳೂರು; ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ವಾಗ್ವಾದದ ಸುದ್ದಿಯನ್ನು ಪ್ರಕಟಿಸಿದ ಪತ್ರಿಕೆಗಳನ್ನು ವೀಕ್ಷಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ‘ಇದು ಅಸಹ್ಯಕರವಾಗಿದೆ’ ಎಂದು ಹೇಳಿದ್ದಾರೆ. ಭಾನುವಾರದಂದು ಟಿವಿಯಲ್ಲಿ ಸುದ್ದಿ ನೋಡಿದ್ದ ಅವರು ಭಾನುವಾರ ಸಂಜೆ ಅವರ ಸಿಬ್ಬಂದಿಯಿಂದಲೂ ಮಾಹಿತಿ ಪಡೆದರು. ಸೋಮವಾರ ಪತ್ರಿಕೆಗಳನ್ನು ಓದಿದ ನಂತರ ಅವರು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮತ್ತು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರಿಗೆ ಕರೆ ಮಾಡಿ ಈ ಅತಂರ್ಯುದ್ಧ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.

‘ನೀವು ಹೇಗೆ ಮಾಡುತ್ತೀರಿ ಎಂದು ನನಗೆ ಗೊತ್ತಿಲ್ಲ. ಆದರೆ ಈ ಅಂತರ್ಯುದ್ಧ ತಕ್ಷಣವೇ ಕೊನೆಗೊಳ್ಳುವುದನ್ನು ನೋಡಿ. ಇದು ಅಸಹ್ಯಕರವಾಗಿದೆ. ಇದರಿಂದ ರಾಜ್ಯದ ಪ್ರತಿಷ್ಠೆ ದಕ್ಕೆ ಯಾಗುತ್ತಿದೆ ಎಂದು ಬೊಮ್ಮಾಯಿ ಇಬ್ಬರು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದಾರೆ.

 

Share Post