BengaluruCinemaPolitics

ರಾಜಕೀಯಕ್ಕೆ ಬರುವಂತೆ ಆಹ್ವಾನ ಬಂದಿದ್ದು ನಿಜ; ನಟ ಸುದೀಪ್‌

ಬೆಂಗಳೂರು; ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳಿಂದ ಆಹ್ವಾನ ಬಂದಿರುವುದು ನಿಜ ಎಂದು ನಟ ಸುದೀಪ್‌ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಯಾರೂ ರಾಜಕಾರಣಕ್ಕೆ ಬರುವಂತೆ ಆಫರ್‌ ಕೊಟ್ಟಿಲ್ಲ ಎಂದು ನಾನು ತೇಲಿಸೋದಕ್ಕೆ ಹೋಗೋದಿಲ್ಲ. ನನಗೆ ಎರಡೂ ಪಕ್ಷಗಳಿಂದ ಆಫರ್‌ಗಳು ಬಂದಿವೆ. ಆದ್ರೆ ಎರಡೂ ಪಕ್ಷಗಳಲ್ಲಿ ಆಪ್ತರಿರೋದ್ರಿಂದ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಡಿ.ಕೆ.ಶಿವಕುಮಾರ್‌ ಅವರು ಸುದೀಪ್‌ ನಿವಾಸಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮೊದಲು ರಮ್ಯಾ ಅವರು ಸುದೀಪ್‌ ಅವರನ್ನು ಕಾಂಗ್ರೆಸ್‌ ಬರುವಂತೆ ಒಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ಈ ಬಗ್ಗೆ ಸುದೀಪ್‌ ಇದುವರೆಗೂ ಮಾತನಾಡಿರಲಿಲ್ಲ. ಇದೀಗ ಈ ಬಗ್ಗೆ ಹೇಳಿಕೆ ಕೊಟ್ಟಿರುವ ಅವರು, ನನಗೆ
ಡಿ.ಕೆ.ಶಿವಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ, ರಮ್ಯಾ, ಸುಧಾಕರ್ ಸೇರಿ ಹಲವರು ಆಪ್ತರಿದ್ದಾರೆ. ಹೀಗಾಗಿ ನನಗೆ ನಿರ್ಧಾರ ಮಾಡೋದಕ್ಕೆ ಕಷ್ಟವಿದೆ. ಜೊತೆಗೆ ಕೆಲವರು ರಾಜಕೀಯ ಬೇಡ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಚಿಸಿ ಸೂಕ್ತ ತೀರ್ಮಾನ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

Share Post