CrimeNational

ಅಬಕಾರಿ ನೀತಿ ಹಗರಣ; ಬುಚ್ಚಿಬಾಬು ಗೋರಂಟ್ಲ ಅರೆಸ್ಟ್

ನವದೆಹಲಿ; ದೆಹಲಿ ಅಬಕಾರಿ ನೀತಿ ಪ್ರಕರಣ‌ ಸಂಬಂಧ ಚಾರ್ಟೆಡ್‌ ಅಕೌಂಟೆಂಟ್‌ ಒಬ್ಬರನ್ನು ಕೇಂದ್ರ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಬುಚ್ಚಿಬಾಬು ಗೋರಂಟ್ಲ ಎಂಬುವವರೇ ಬಂಧಿತರು. ಇವರು ಆಂಧ್ರ ಪ್ರದೇಶದವರಾಗಿದ್ದು, ತೆಲಂಗಾಣ ಸಿಎಂ ಕೆ.ಚಂದ್ರಶೇಖರರಾವ್‌ ಅವರ ಪುತ್ರಿ ಕವಿತಾ ಅವರ ಮಾಜಿ ಆಡಿಟರ್‌ ಆಗಿದ್ದಾರೆ.

ಬುಚ್ಚಿಬಾಬು ಅವ್ರು ದೆಹಲಿ ಅಬಕಾರಿ ನೀತಿ ರಚನೆ ಹಾಗೂ ಅನುಷ್ಠಾನದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಡಿ. 12ರಂದು ಕೆಸಿಆರ್ ಪುತ್ರಿ ಕವಿತಾ ಅವರನ್ನು ಹೈದರಾಬಾದ್‍ನಲ್ಲಿ ಸಿಬಿಐ ವಿಚಾರಣೆ ನಡೆಸಿತ್ತು.

Share Post