BengaluruPolitics

ನಾವು ಆಂತರಿಕವಾಗಿ ಸದೃಢವಾಗಿದ್ದೇವೆ; ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು; ಭಾರತದ ಆರ್ಥಿಕತೆ ಅತಿ ವೇಗವಾಗಿ ಬೆಳೆಯುತ್ತಿದೆ. ದೇಶದ ಹೊರಗಿನ ಪರಿಸ್ಥಿತಿಗಳು ಏನೇ ಇದ್ದರೂ ಕೂಡಾ ನಾವು ಆಂತರಿಕವಾಗಿ ಬಹಳ ಗಟ್ಟಿಯಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಭಾರತ ಇಂಧನ ಸಪ್ತಾಹ 2023ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸದೃಢ ಸರ್ಕಾರ, ನಿರಂತರ ಪರಿವರ್ತನೆ, ತಳಮಟ್ಟದಲ್ಲಿ ಸಾಮಾಜಿಕ ಆರ್ಥಿಕ ಪ್ರಾಬಲ್ಯ ಭಾರತವನ್ನು ಗಟ್ಟಿಯಾಗಿ ಮಾಡಿದೆ. ಟರ್ಕಿಯಲ್ಲಿ ಭೂಕಂಪ ಉಂಟಾಗಿದ್ದು, ಅಪಾರ ಸಾವುನೋವು ಸಂಭವಿಸಿದೆ. ಇದ್ರಿಂದ ನನಗೆ ಸಾಕಷ್ಟು ನೋವಾಗಿದೆ. ಅವರೊಂದಿಗೆ ಭಾರತೀಯರಾದ ನಾವೆಲ್ಲರೂ ಜೊತೆಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

Share Post