CrimeDistricts

ವಾಮಾಚಾರಕ್ಕೆ ಜೀವಂತ ಗೂಬೆ ಬಳಕೆ; ಇಬ್ಬರ ಬಂಧನ

ಕೊಳ್ಳೇಗಾಲ; ವಾಮಾಚಾರಕ್ಕೆ ಜೀವಂತ ಗೂಬೆ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಜಾಗೇರಿ ಬಳಿ ನೆಡೆದಿದೆ.

ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಹೊನ್ನೇನೆಹಳ್ಳಿ ಗ್ರಾಮದ ಪುಟ್ಟರಾಜು ಮತ್ತು ಯಡಹಳ್ಳಿ ಗ್ರಾಮದ ಹರೀಶ್ ಬಂಧಿತರು. ಇವರು ಮಾಟ ಮಾಂತ್ರಿಕನಿಗೆ ಕೊಡಲೆಂದು ಗೂಬೆ ಸಾಗಾಟ ಮಾಡುತ್ತಿದ್ದಾರೆಂದು ತಿಳಿದ ಅರಣ್ಯ ಸಂಚಾರಿದಳದ ಪೊಲೀಸರು ದಾಳಿ ನೆಡೆಸಿ ಇಬ್ಬರನ್ನು ಬಂಧಿಸಿದ್ದು ಗೂಬೆಯನ್ನು ರಕ್ಷಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಅರಣ್ಯ ಸಂಚಾರಿ ದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post