CrimeDistricts

ರಾಮದುರ್ಗ ಬಳಿ ಭೀಕರ ಅಪಘಾತ; 6 ಸವದತ್ತಿ ಯಲ್ಲಮ್ಮ ಭಕ್ತರು ದಾರುಣ ಮರಣ

ಬೆಳಗಾವಿ; ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೋಗುತ್ತಿದ್ದ ಆರು ಭಕ್ತರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ರಾಮದುರ್ಗ ತಾಲ್ಲೂಕಿನ ಹುಲಕುಂದ ಗ್ರಾಮದವರು ಎಂದು ತಿಳಿದುಬಂದಿದೆ.

ಇಂದು ಮುಂಜಾನೆ ಹುಲಕುಂದ ಗ್ರಾಮದ ಜನ ಗೂಡ್ಸ್‌ ವಾಹನದಲ್ಲಿ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೋಗುತ್ತಿದ್ದರು. ಆದ್ರೆ ಚಾಲಕನ ನಿಯಂತ್ರಣ ತಪ್ಪಿ ಚಿಂಚನೂರು ವಿಠಲ್‌ ದೇವಸ್ಥಾನದ ಬಳಿ ಆಲದ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ನಡೆದಿದೆ. ಎಲ್ಲರೂ ಪಾದಯಾತ್ರೆ ಮೂಲಕ ಯಲ್ಲಮ್ಮ ದರ್ಶನಕ್ಕೆ ಹೋಗುತ್ತಿದ್ದರು. ಆದ್ರೆ ಗೂಡ್ಸ್‌ ವಾಹನದ ಚಾಲಕನೇ ವಾಹನ ನಿಲ್ಲಿಸಿ ಅವರನ್ನು ವಾಹನಕ್ಕೆ ಹತ್ತಿಸಿಕೊಂಡಿದ್ದಾನೆ. ಅದಾದ ಕೆಲವೇ ಕ್ಷಣದಲ್ಲಿ ಈ ದುರಂತ ಸಂಭವಿಸಿದೆ.

ದೀಪಾ, ಮಾರುತಿ, ಹನಮವ್ವ ಮ್ಯಾಗಾಡಿ, ಸವಿತಾ, ಸುಪ್ರೀತಾ ಹಾಗೂ ಇಂದ್ರವ್ವ ಮೃತಪಟ್ಟ ದುರ್ದೈವಿಗಳು. ಗೂಡ್ಸ್‌ ವಾಹನ ಅತಿವೇಗವಾಗಿ ಚಲಾಯಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಆಲದ ಮರಕ್ಕೆ ಅತಿವೇವಾಗಿ ಡಿಕ್ಕಿ ಹೊಡೆದಿದ್ದರಿಂದ ಡಿಕ್ಕಿಯ ರಭಸಕ್ಕೆ ಐವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇನ್ನೂ ಒಂದಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Share Post