Districts

ಪಂಚಮಸಾಲಿ ಸಮುದಾಯದ ಮೀಸಲಾತಿ ವಿಚಾರ; 10 ದಿನ ಗಡುವು ಕೇಳಿದ ಸಿಎಂ

ಬೆಳಗಾವಿ; ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವ ಬಗ್ಗೆ ರಾಜ್ಯ ಸರ್ಕಾರ ಇವತ್ತೂ ತೀರ್ಮಾನಕ್ಕೆ ಬಂದಿಲ್ಲ. ಸಿಎಂ ಬೊಮ್ಮಾಯಿ ಇನ್ನೂ ಹತ್ತು ದಿನಗಳ ಗಡುವು ಕೇಳಿದ್ದಾರೆ.

ಪಂಚಮಸಾಲಿ ಸಮುದಾಯದ ಮುಖಂಡರು ಸಿಎಂ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಸಿಎಂ ಇನ್ನೂ ಹತ್ತು ದಿನ ಟೈಂ ಕೊಡಿ, ನಿಮ್ಮ ಸಮಸ್ಯೆ ಬಗ್ಗೆ ಸ್ಪಷ್ಟ ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ.

ಸಿಎಂ ಬೊಮ್ಮಾಯಿ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದ ಪಂಚಮಸಾಲಿ ಸಮಾಜದ ನಾಯಕರು,  ವೇದಿಕೆಯಲ್ಲೇ ನಿರ್ಧಾರ ತಿಳಿಸ್ತೀವಿ ಅಂತ ಅಲ್ಲಿಂದ ತೆರಳಿದ್ದಾರೆ.

Share Post