CrimeDistricts

ರಸ್ತೆ ದಾಟುವಾಗ ಡಿಕ್ಕಿ ಹೊಡೆದ ಬಸ್‌; ಮೂವರು ವಿದ್ಯಾರ್ಥಿಗಳ ದುರ್ಮರಣ

ಬಳ್ಳಾರಿ; ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಸಾರಿಗೆ ಬಸ್‌ ಡಿಕ್ಕಿ ಹೊಡೆದಿದ್ದು, ಮೂವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ತಾಲ್ಲೂಕಿನ ಹಲಕುಂದಿಯಲ್ಲಿ ನಡೆದಿದೆ. ಎಮ್ಮಿಗನೂರಿನ ಕನಕರಾಜು, ಮುರುಡಿ ಗ್ರಾಮದ ಶಂಕರ್‌, ನಾಗೇನಹಳ್ಳಿಯ ಹೊನ್ನೂರ ಸಾವನ್ನಪ್ಪಿದ ವಿದ್ಯಾರ್ಥಿಗಳು.

ಶಾಲೆಗೆ ರಜೆ ಇರುವಾಗ ಈ ವಿದ್ಯಾರ್ಥಿಗಳು ಪಾರ್ಟ್‌ ಟೈಮ್‌ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಹಾಸ್ಟೆಲ್‌ಗೆ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share Post