BengaluruCinema

ರಶ್ಮಿಕಾರನ್ನು ಯಾಕೆ ಬ್ಯಾನ್‌ ಮಾಡಬೇಕು; ನಟ ಧನಂಜಯ್‌ ಪ್ರಶ್ನೆ

ಬೆಂಗಳೂರು; ನ್ಯಾಷನಲ್‌ ಕ್ರಶ್‌ ಎಂದೇ ಹೆಸರಾಗಿರುವ ನಟಿ ರಶ್ಮಿಕಾ ಮಂದಣ್ಣ ಕನ್ನಡದ ಹುಡುಗಿ. ಆಕೆಯನ್ನು ಯಾಕೆ ಬ್ಯಾನ್‌ ಮಾಡಬೇಕು ಎಂದು ನಟ ಧನಂಜಯ್‌ ಪ್ರಶ್ನೆ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಕೇಳಿ ಪ್ರಶ್ನೆಗೆ ಉತ್ತರಿಸಿರುವ ಧನಂಜಯ್‌, ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಅವರದ್ದೇ ಬದುಕಿದೆ. ಯಾರೂ ಯಾರನ್ನೂ ಇಲ್ಲಿ ಬರಬೇಡಿ ಎಂದು ಹೇಳೋದಕ್ಕೆ ಸಾಧ್ಯವಾಗೋದಿಲ್ಲ ಎಂದು ಹೇಳಿದ್ದಾರೆ.

ಸಣ್ಣ ತಪ್ಪಾಯ್ತು ಅಂತ ಮನೆಯ ಮಕ್ಕಳನ್ನು ಹೊರಗೆ ಹಾಕೋದಕ್ಕೆ ಆಗುತ್ತಾ ಎಂದು ಪ್ರಶ್ನೆ ಮಾಡಿರುವ ಧನಂಜಯ್‌, ರಶ್ಮಿಕಾ ಕೂಡಾ ಅಷ್ಟೇ. ಅವರು ಎಲ್ಲಿದ್ದರೂ ಕನ್ನಡದ ಹುಡುಗಿಯೇ ಎಂದು ಹೇಳಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು, ಸಂದರ್ಶನವೊಂದರಲ್ಲಿ ಮೊದಲ ಚಿತ್ರದ ನಿರ್ಮಾಣ ಸಂಸ್ಥೆಯ ಹೆಸರನ್ನ ಹೇಳಿರಲಿಲ್ಲ. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ರಶ್ನಿಕಾರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಬೇಕು ಎಂಬ ಆಗ್ರಹ ಕೇಳಿಬಂದಿತ್ತು.

Share Post