BengaluruCrime

ಪ್ರೇಮಿಗಳಿಬ್ಬರ ಅನುಮಾನಾಸ್ಪದ ಸಾವು; ರೈಲು ಹಳಿ ಮೇಲೆ ಸಿಕ್ಕ ದೇಹಗಳು

ನೆಲಮಂಗಲ; ನೆಲಮಂಗಲದ ಹುಸ್ಕೂರು ಬಳಿ ಪ್ರೇಮಿಗಳಿಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ರೈಲು ಹಳಿ ಮೇಲೆ ಪ್ರೇಮಿಗಳ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆಯೋ, ಆತ್ಮಹತ್ಯೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಚಿಕ್ಕಬಾಣಾವರ ಮತ್ತು ಗೊಲ್ಲಹಳ್ಳಿ ರೈಲು ನಿಲ್ದಾಣಗಳ ನಡುವಿನ ಹುಸ್ಕೂರು ನಿಲ್ದಾಣದ ಬಳಿಯಲ್ಲೇ ಹಳಿಯ ಮೇಲೆ ಮೃತದೇಹಗಳು ಸಿಕ್ಕಿವೆ. ಮೃತನನ್ನು ನಾಗೇಂದ್ರ ಎಂದು ಗುರುತಿಸಲಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಯ ಮದುವೆಗೆ ಮನೆಯವರು ವಿರೋಧ ಮಾಡಿದ್ದರು. ಹೀಗಾಗಿ ಮನೆ ಬಿಟ್ಟು ಓಡಿ ಬಂದು ಇಬ್ಬರು ಮದುವೆಯಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಯಶವಂತಪುರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post