CrimeDistricts

ಪತ್ನಿಯನ್ನು ಕೊಂದು ಕಾಡಿನಲ್ಲಿ ಹೂತಿಟ್ಟು ಬಂದ ಪಾಪಿ ಪತಿ

ದಾವಣಗೆರೆ; ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಆಕೆ ಗರ್ಭಿಣಿ ಬೇರೆ. ಆದ್ರೆ ಗಂಡನಿಗೆ ಪತ್ನಿಯ ಶೀಲದ ಶಂಕೆ. ಇದೇ ಕಾರಣಕ್ಕೆ ಕಟ್ಟಿಕೊಂಡ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಅನಂತರ ಪಾಪಿ ಪತಿ ಹೆಂಡತಿಯ ಮೃತದೇಹವನ್ನು ಕಾಡಿನಲ್ಲಿ ಹೂತಿಟ್ಟು ಬಂದಿದ್ದಾನೆ. ಈ ಘಟನೆ ನಡೆದಿರೋದು ಚನ್ನಗಿರಿ ತಾಲ್ಲೂಕಿನ ಗಂಗಗೊಂಡನಹಳ್ಳಿ ಗ್ರಾಮದಲ್ಲಿ.

ಕೊಲೆಯಾದ ಮಹಿಳೆ ಹೆಸರು ರಶ್ಮಿ. ಐಗೂರು ಗ್ರಾಮದ ಲೋಕೇಶಪ್ಪ, ರತ್ನಮ್ಮ ದಂಪತಿಯ ಕೊನೆಯ ಪುತ್ರಿ ರಶ್ಮಿಯನ್ನು ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿಯ ಮೋಹನ್ ಕುಮಾರ್ ಅಲಿಯಾಸ್ ಮನು ಜೊತೆ ವಿವಾಹ ಮಾಡಲಾಗಿತ್ತು. ಏಪ್ರಿಲ್ 13 ರಂದು ಅದ್ದೂರಿಯಾಗಿ ವಿವಾಹ ನೆರವೇರಿತ್ತು. ಅದ್ಯಾಕೋ ಮೋಹನ್‌ ಕುಮಾರ್‌ಗೆ ಮೊದಲಿನಿಂದಲೂ ಪತ್ನಿಯ ಬಗ್ಗೆ ಅನುಮಾನ. ಇದೇ ಅನುಮಾನವೇ ಈಗ ರಶ್ಮಿ ಜೀವಕ್ಕೆ ಎರವಾಗಿದೆ. ಈ ಬಗ್ಗೆ ರಶ್ಮಿ ಪೋಷಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Share Post