CrimeDistricts

ಯೋಧರ ಕುಟುಂಬಗಳ ಜಮೀನು ಜಗಳ; ಯೋಧರೊಬ್ಬರ ಸಹೋದರನ ಹತ್ಯೆ

ಹಾಸನ; ಜಮೀನು ಗಲಾಟೆ ವಿಚಾರದಲ್ಲಿ ಇಬ್ಬರು ಯೋಧರ ಕುಟುಂಬಳ ನಡುವೆ ಗಲಾಟೆ ನಡೆದಿದ್ದು, ಇದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ತಿರುಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಯಶ್ವಂತ್‌ ಎಂಬುವವರ ಮೇಲೆ ಕುಡುಗೋಲಿನಿಂದ ತೀವ್ರ ಹಲ್ಲೆ ಮಾಡಲಾಗಿತ್ತು. ಯಶ್ವಂತ್‌ ತೀವ್ರ ರಕ್ತಸ್ರಾವದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಯೋಧ ಚಂದನ್‌ ಹಾಗೂ ಸಂಬಂಧಿಕರಿಂದ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಮೃತ ಯಶ್ವಂತ್‌ ಸಹೋದರ ಹಾಗೂ ಯೋಧ ಯತೀಶ್‌ ಕೂಡಾ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯುತ್ತಿದ್ದಾರೆ. ಚಂದನ್ ಮತ್ತು ಯಶ್ವಂತ್ ಕುಟುಂಬದ ನಡುವೆ ಜಮೀನಿಗಾಗಿ ಕಿತ್ತಾಟ ನಡೆದಿತ್ತು. ಈ ಬಗ್ಗೆ ಹಲವಾರು ಬಾರಿ ಗಲಾಟೆ ನಡೆದಿದ್ದು, ನಿನ್ನೆ ಅದು ತಾರಕಕ್ಕೇರಿತ್ತು. ಈ ವೇಳೆ ಚಂದನ್‌ ಅಜ್ಜಿ ಬಳಿ ಇದ್ದ ಕುಡುಗೋಲು ಕಿತ್ತುಕೊಂಡು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಹಳೇಬೀಡು ಪೊಲೀಸ್‌ ಠಾಣೆಯಲ್ಲಿ ಚಂದನ್‌ ಹಾಗೂ ಅವರ ಸಹೋದರ ಅಶ್ವಥ್‌ ಸೇರಿ ಐದು ಮಂದಿಯ ವಿರುದ್ಧ ದೂರು ದಾಖಲಿಸಲಾಗಿದೆ.

Share Post