CrimeDistricts

ಕೆಆರ್‌ಎಸ್‌ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ; ಪ್ರವಾಸಿಗರಿಗೆ ನಿರ್ಬಂಧ

ಮಂಡ್ಯ; ಶ್ರೀರಂಗಪಟ್ಟಣ ಸಮೀಪದ ಕೆಆರ್‌ಎಸ್ ಎದುರಿನ ಬೃಂದಾವನದಲ್ಲಿ ನಿನ್ನೆ ಸಂಜೆ ಚಿರತೆಯೊಂದು ಕಾಣಿಸಿಕೊಂಡಿತ್ತು. ಇದರಿಂದಾಗಿ ಪ್ರವಾಸಿಗರು ಭಯಭೀತರಾಗಿದ್ದಾರೆ. ಜೊತೆಗೆ ಸ್ಥಳದಲ್ಲಿ ಈಗ ಹೆಚ್ಚಿನ ಭದ್ರತೆ ಹಾಗೂ ನಿಗಾ ವಹಿಸಲಾಗಿದೆ.

ಮೀನುಗಾರಿಕಾ ಇಲಾಖೆಯ ಅಕ್ವೇರಿಯಂ ಬಳಿಯ ಖಾಸಗಿ ಹೋಟೆಲ್‌ ಕಡೆ ಚಿರತೆ ಹೋಗುತ್ತಿರುವುದನ್ನು ಭದ್ರತಾ ಸಿಬ್ಬಂದಿ ನೋಡಿದ್ದಾರೆ. ಕೂಡಲೇ ಅವರು ಜಾಗೃತರಾಗಿ ಪ್ರವಾಸಿಗರನ್ನು ಅಲ್ಲಿಂದ ಹೊರಗೆ ಕಳುಹಿಸಿದ್ದಾರೆ. ಚಿರತೆ ಕಾಣಿಸಿದ ಕಾರಣದಿಂದಾಗಿ ಸದ್ಯಕ್ಕೆ ಬೃಂದಾವಣ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. 15 ದಿನಗಳ ಅಂತರದಲ್ಲಿ ಬೃಂದಾವನದಲ್ಲಿ ಮೂರು‌ ಬಾರಿ ಚಿರತೆ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಎರಡು ಕಡೆ ಬೋನು ಇರಿಸಲಾಗಿದೆ. ಆದ್ರೆ ಚಿರತೆ ಬೋನಿಗೆ ಬೀಳದೇ ತಪ್ಪಿಸಿಕೊಂಡು ತಿರುಗಾಡುತ್ತಿದೆ.

Share Post