Districts

ಮೈಸೂರಿಗೆ ಬಂದ ವಂದೇ ಭಾರತ್‌ ಭಾರತ್‌ ಎಕ್ಸ್‌ಪ್ರೆಸ್‌; ಅದ್ದೂರಿ ಸ್ವಾಗತ

ಮೈಸೂರು; ದಕ್ಷಿಣ ಭಾರತದಲ್ಲಿ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ರೆಡಿಯಾಗಿದೆ. ಇಂದು ಪ್ರಾಯೋಗಿಕ ಸಂಚಾರ ಕೂಡಾ ಮಾಡಿದೆ. ಇಂದು ಬೆಳಗ್ಗೆ ಚೆನ್ನೈನಿಂದ ಹೊರಟ ರೈಲು ಮಧ್ಯಾಹ್ನ 12.13ಕ್ಕೆ ಮೈಸೂರು ತಲುಪಿದೆ.

ಚೆನ್ನೈ-ಮೈಸೂರು ಮಾರ್ಗದ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ನ.11ರಂದು ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ಈ ಹೈಸ್ಪೀಡ್‌ ರೈಲನ್ನು ಮೊದಲ ಬಾರಿ ನೋಡುವ ಕಾತರದಲ್ಲಿದ್ದ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್ ನಲ್ಲಿ ಜಮಾಯಿಸಿದ್ದರು‌. ರೈಲು ಎಂಜಿನ್‌ ಕಾಣುತ್ತಿದ್ದಂತೆ ಹರ್ಷೋದ್ಗಾರ, ಶಿಳ್ಳೆ-ಚಪ್ಪಾಳೆ ಮುಗಿಲು ಮುಟ್ಟಿತ್ತು.

Share Post