Uncategorized

ಬಂಧನವಾದರೂ ಪೀಠ ತ್ಯಾಗ ಮಾಡದ ಮುರುಘಾಶ್ರೀ; ಸಭೆ ಕರೆದ ಮುಖಂಡರು

ಚಿತ್ರದುರ್ಗ; ಇಬ್ಬರು ಹಾಸ್ಟೆಲ್‌ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರು ಒಂದು ತಿಂಗಳಾಗುತ್ತಾ ಬಂದರೂ ಪೀಠ ತ್ಯಾಗ ಮಾಡಿಲ್ಲ. ಹೀಗಾಗಿ ಮಠದ ಮುಂದಿನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಚರ್ಚೆ ಮಾಡಲು ಲಿಂಗಾಯತ ಮುಖಂಡರು ಇದೇ ತಿಂಗಳ 29 ರಂದು ಸಭೆ ಕರೆದಿದ್ದಾರೆ. 

ಚಿತ್ರದುರ್ಗದ ಸೀಬಾರದ ಮಾಜಿ ಮುಖ್ಯಮಂತ್ರಿ ಎಸ್‌ ನಿಜಲಿಂಗಪ್ಪ ಅವರ ಸಮಾಧಿಯ ಬಳಿ ಸಭೆ ಸೇರಲು ಸಮುದಾಯದ ಪ್ರಮುಖರು ನಿರ್ಧರಿಸಿದ್ದಾರೆ. ಲಿಂಗಾಯಿತ ಸಮುದಾಯದ ಮುಖಂಡರಾದ ಜಿ.ವಿ ರುದ್ರಪ್ಪ, ಎಂ.ಬಿ ತಿಪ್ಪೇರುದ್ರಪ್ಪ, ಎಂ.ಟಿ ಮಲ್ಲಿಕಾರ್ಜುನ ಸ್ವಾಮಿ, ಕೆ.ವಿ ಪ್ರಭಾಕರ್‌ ಮತ್ತು ಎಸ್‌. ಷಣ್ಮುಗಪ್ಪ ಎಂಬುವವರು ಸಮಾಜ ಬಾಂಧವರಿಗೆ ಪತ್ರ ಬರೆದು, ಮಠದ ಭವಿಷ್ಯದ ಕುರಿತು ಚರ್ಚಿಸಲು ಸಭೆ ಕರೆದಿರುವುದಾಗಿ ಹೇಳಿದ್ದಾರೆ. ಪತ್ರವನ್ನು ಮಠದ ಭಕ್ತರಾದ ಸಮಾಜದ ಗಣ್ಯರಿಗೆ ಕಳುಹಿಸಲಾಗಿದೆ.

Share Post