Districts

ವಿಜಯಪುರ ಜಿಲ್ಲೆಯಲ್ಲಿ ಕಂಪಿಸಿದ ಭೂಮಿ; ಜನರಲ್ಲಿ ಆತಂಕ

ವಿಜಯಪುರ; ವಿಜಯಪುರ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜೋರಾಗಿ ಶಬ್ದ ಕೂಡಾ ಕೇಳಿಬಂದಿದೆ.  ತಿಕೋಟಾ ತಾಲೂಕಿನ ಕೆಲ ಗ್ರಾಮಗಳಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಭಾರೀ ಶಬ್ದ ಕೇಳಿ ಬಂದಿದೆ. ಭೂ ಕಂಪನದ ಅನುಭವವಾಗುತ್ತಿದ್ದಂತೆ, ಜನ ಭಯಗೊಂಡು ಮನೆಗಳಿಂದ ಓಡಿಬಂದಿದ್ದಾರೆ.

ತಿಕೋಟಾ ತಾಲೂಕಿನ ಬಾಬಾನಗರ, ಬಿಜ್ಜರಗಿ, ಕಳ್ಳಕವಟಗಿ, ಘೋಣಸಗಿ ಸುತ್ತಮುತ್ತ ಈ ಭೂಕಂಪನದ ಅನುಭವವಾಗಿದೆ. ತುಂತುರು ಮಳೆಯ ನಡುವೆಯೆ ಭೂಮಿಯಿಂದ ಜೋರಾದ ಶಬ್ದ ಕೇಳಿಬಂದಿದೆ. ಘಟನೆಯಿಂದಾಗಿ ಗಾಬರಿಗೊಂಡ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಈ ಮಧ್ಯೆ, ಭೂಕಂಪನ ಅಗಿಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಬೆಂಗಳೂರಿನ ಆಧಿಕಾರಿಗಳೂ ಸಹ ಈ ಮಾಹಿತಿಹಯನ್ನು ದೃಢಪಡಿಸಿದ್ದಾರೆ.

Share Post