CrimeDistricts

ಅತ್ಯಾಚಾರ ಯತ್ನ ಪ್ರಕರಣ; ಎಸ್‌.ಕೆ.ಬಸವರಾಜನ್‌ಗೆ ಜಾಮೀನು

ಚಿತ್ರದುರ್ಗ; ಮುರುಘಾ ಮಠದ ಹಾಸ್ಟೆಲ್‌ನ ಮಹಿಳಾ ವಾರ್ಡನ್‌ ದಾಖಲಿಸಿದ್ದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಮಠದ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಹಾಗೂ ಅವರ ಪತ್ನಿ ಸೌಭಾಗ್ಯಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಬಸವರಾಜನ್‌ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಬಸವರಾಜನ್‌ ದಂಪತಿಗೆ ಜಾಮೀನು ನೀಡಿದ್ದಾರೆ. ಇದರಿಂದಾಗಿ ಬಸವರಾಜನ್‌ ದಂಪತಿ ಬಂಧನದ ಭೀತಿಯಿಂದ ಪಾರಾಗಿದ್ದಾರೆ.

ಮುರುಘಾ ಶ್ರೀಗಳ ವಿರುದ್ಧ ಇಬ್ಬರು ವಿದ್ಯಾರ್ಥಿನಿಯರು ದೂರು ನೀಡಿದ ದಿನವೇ ಮಹಿಳಾ ವಾರ್ಡನ್‌ ಎಸ್‌.ಕೆ.ಬಸವರಾಜನ್‌ ದಂಪತಿ ವಿರುದ್ಧ ಖೇಸ್‌ ದಾಖಲಿಸಿದ್ದರು. ಎಸ್‌.ಕೆ.ಬಸವರಾಜನ್‌ ಹಾಗೂ ಸ್ವಾಮೀಜಿ ನಡುವೆ ಭಿನ್ನಾಭಿಪ್ರಾಯವಿದ್ದು, ಬಸವರಾಜನ್‌ ಅವರನ್ನು ೨೦೦೭ರಲ್ಲಿ ಮಠದಿಂದ ಹೊರಗೆ ಹಾಕಲಾಗಿತ್ತು. ಅನಂತರ ಬಸವರಾಜನ್‌ ಅವರು ಕಳೆದ ಮಾರ್ಚ್‌ ಮಠದ ಆಡಳಿತಾಧಿಕಾರಿಯಾಗಿ ಮಠಕ್ಕೆ ಮರಳಿದ್ದರು. ಬಸವರಾಜನ್‌ ಅವರೇ ವಿದ್ಯಾರ್ಥಿನಿಯರನ್ನು ಬಳಸಿಕೊಂಡು ಸ್ವಾಮೀಜಿ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆಂಬ ಆರೋಪವಿದೆ. ಈ ಬೆನ್ನಲ್ಲೇ ಮಠದ ಹಾಸ್ಟೆಲ್‌ ವಾರ್ಡನ್‌ ಅತ್ಯಾಚಾರ ಯತ್ನ ಕೇಸ್‌ ದಾಖಲಿಸಿದ್ದರು. ಅಂದಿನಿಂದ ಬಸವರಾಜನ್‌ ದಂಪತಿ ನಾಪತ್ತೆಯಾಗಿದ್ದರು.

Share Post