DistrictsPolitics

ಸಿದ್ದರಾಮೋತ್ಸವದಲ್ಲಿ ಅಭಿಮಾನಿಗಳ ಮಹಾಪೂರ; ಮನಸೆಳೆದ ಹಾಡುಗಳು

ದಾವಣಗೆರೆ; ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ದಾವಣಗೆರೆ ಹೊರವಲಯದ ಕುಂದವಾಡದ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನ ಭಾಗವಹಿಸಿದ್ದಾರೆ. ಇನ್ನೂ ಜನ ಬರುತ್ತಲೇ ಇದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಅವರ ಕುರಿತ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಸಿದ್ದರಾಮಯ್ಯ ಅವರು ವೇದಿಕೆಗೆ ಬಂದಾಗ ಉಂಟಾದ ನೂಕುನುಗ್ಗಲಿನಿಂದಾಗಿ ಮಾಜಿ ಸಚಿವ ಎಚ್. ಆಂಜನೇಯ ವೇದಿಕೆಯ ಮೇಲೆ ಎಡವಿ ಬಿದ್ದರು. ಕೂಡಲೇ ವೇದಿಕೆಯಲ್ಲಿ ಇದ್ದವರು ಕೈ ಹಿಡಿದು ಮೇಲಕ್ಕೆತ್ತಿದರು. ಸಾವರಿಸಿಕೊಂಡ ಆಂಜನೇಯ ಅವರು ಸಿದ್ದರಾಮಯ್ಯ ಅವರ ಕೈಕುಲುಕಿ ಸ್ವಾಗತಿಸಿದರು. ಸಾಧು ಕೋಕಿಲ ಮತ್ತು ಬಳಗ ವೇದಿಕೆಯಲ್ಲಿ ಹಾಡುತ್ತಿದ್ದರೆ ಜನ ಹುಚ್ಚೆದ್ದು ಕೇಕೆ ಹಾಕಿದರು. ಕುಣಿಯಲು ಜಾಗ ಇಲ್ಲದ ಕಾರಣ ಇದ್ದಲ್ಲೇ ಮೈಕೈ ಅಲ್ಲಾಡಿಸಿದರು. ‘ಗೊಂಬೆ ಹೇಳುತೈತೆ’ ಹಾಡು ಹಾಡುವಾಗ ಎಲ್ಲರೂ ಮೊಬೈಲ್‌ನಲ್ಲಿ ಲೈಟ್ ಆನ್ ಮಾಡಿ ಬೆಳಕು ಹರಿಸಿದರು. ‘ಒಳಿತು ಮಾಡು ಮನುಜ’ ಹಾಡಿಗೆ ಜನರು ಧ್ವನಿಗೂಡಿಸಿದರು.

Share Post