NationalSports

ಕಬಡ್ಡಿ ಆಡುತ್ತಿರುವಾಗಲೇ ಹೃದಯಾಘಾತ; ೨೨ ವರ್ಷದ ಯುವಕ ಸಾವು

ಸೇಲಂ; ಕಬಡ್ಡಿ ಆಡುತ್ತಿದ್ದ ಸಮಯದಲ್ಲಿ ಆಟಗಾರನೊಬ್ಬನಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಸೇಲಂ ಬಳಿಯ ಮನಾದಿಕುಪ್ಪಂ ಪಟ್ಟಣದಲ್ಲಿ ನಡೆದಿದೆ. ಮೃತನನ್ನು 22 ವರ್ಷದ ವಿಮಲ್‌ರಾಜ್ ಎಂದು ಗುರುತಿಸಲಾಗಿದೆ. ಸೇಲಂನ ‘ಸಾಮಿ ಕಬಡ್ಡಿ ಅಕಾಡೆಮಿ’ ಆಯೋಜಿಸಿದ್ದ ಟೂರ್ನಿಯ ಪಂದ್ಯವೊಂದರಲ್ಲಿ ಆಡುತ್ತಿದ್ದಾಗ ಹೃದಯಾಘಾತವಾಗಿದೆ.

ರೈಡಿಂಗ್‌ಗೆ ಹೋಗಿದ್ದ ವಿಮಲರಾಜ್ ಮೇಲೆ ಎದುರಾಳಿ ತಂಡದವರು ಆಕ್ರಮಣ ಮಾಡಿದ್ದಾರೆ. ಈ ವೇಳೆ ಎದುರಾಳಿ ತಂಡದ ಆಟಗಾರ ವಿಮಲರಾಜ್ ಮೇಲೆ ಓಡಿ ಬಂದು ಮೊಣಕಾಲು ಇಟ್ಟಿದ್ದಾನೆ. ಇದರಿಂದ ಸ್ಥಳದಲ್ಲೆ ಕುಸಿದುಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅಷ್ಟರಲ್ಲಾಗಲೇ ಪ್ರಾಣಪಕ್ಷ ಹಾರಿಹೋಗಿತ್ತು.

Share Post