CrimeDistricts

ಮೋಸ ಮಾಡಿದ್ದಾಳೆಂದು ಕೋಪ; ಪ್ರೇಯಸಿಯನ್ನು ಕೊಂದು ತಾನೂ ಆತ್ಮಹತ್ಯೆ

ಬೆಳಗಾವಿ; ಪ್ರೇಯಸಿ ಮೋಸ ಮಾಡಿದ್ದಾಳೆಂದು ರೊಚ್ಚಿಗೆದ್ದ ಪ್ರಿಯಕರ ಆಕೆಯನ್ನು ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಗಾವಿ ನಗರದ ಬಸವ ಕಾಲೋನಿಯಲ್ಲಿ ನಡೆದಿದೆ. ರಾಮಚಂದ್ರ ತೆಣಗಿ ಆತ್ಮಹತ್ಯೆ ಮಾಡಿಕೊಂಡ ಯುವಕ, ರೇಣುಕಾ ಕೊಲೆಯಾದ ಯುವತಿ ಎಂದು ಗುರುತಿಸಲಾಗಿದೆ.

ರಾಮಚಂದ್ರ ತೆಣಗಿ ರಾಣಿ ಚೆನ್ನಮ್ಮ ವಿವಿಯಲ್ಲಿ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ಓದುತ್ತಿದ್ದ. ಕೊಲೆಯಾದ ರೇಣುಕಾ ನರ್ಸ್‌ ಕೆಲಸ ಮಾಡುತ್ತಿದ್ದು, ಏಕಾಂಗಿಯಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ರೇಣುಕಾ ಸವದತ್ತಿ ತಾಲ್ಲೂಕಿನ ಮದ್ದೂರು ಗ್ರಾಮದವರಾಗಿದ್ದು, ರಾಮಚಂದ್ರನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದ್ರೆ ಆಕೆ ಮೋಸ ಮಾಡಿದ್ದಾಳೆಂದು ರೊಚ್ಚಿಗೆದ್ದಿದ್ದ ರಾಮಚಂದ್ರ, ರಾತ್ರಿ ಆಕೆಯ ಮನೆಗೆ ಬಂದಿದ್ದಾನೆ. ವೈರ್‌ನಿಂದ ಆಕೆಯ ಕುತ್ತಿಗೆ ಬಿಗಿದು ಸಾಯಿಸಿದ್ದಾನೆ. ನಂತರ ತಾನೂ ನೇಣಿಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೂ ಮೊದಲು ಆರೋಪಿ ರಾಮಚಂದ್ರ ಡೆತ್‌ ನೋಟ್‌ ಬರೆದಿಟ್ಟಿದ್ದಾನೆ. ಜೊತೆಗೆ ಸಂಬಂಧಿಯೊಬ್ಬರು ವಾಟ್ಸ್‌ ಆಪ್‌ ಮೆಸೇಜ್‌ ಕೂಡಾ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.

Share Post