National

ಗಾಂಧಿ ಕುಟುಂಬದ 2 ಸಾವಿರ ಕೋಟಿ ಉಳಿಸಲು ಹೋರಾಟ; ಸ್ಮೃತಿ ಇರಾನಿ

ನವದೆಹಲಿ; ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಭ್ರಷ್ಟಾಚಾರ ಬಯಲಾಗಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್‌ ಬೀದಿಗಿಳಿದಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೇವಡಿ ಮಾಡಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಅವರು, ಸೋನಿಯಾಗಾಂಧಿ ಹಾಗೂ ರಾಹುಲ್‌ ಗಾಂಧಿಗೆ ಸಮನ್ಸ್‌ ನೀಡಿದ್ದಕ್ಕೆ ಕಾಂಗ್ರೆಸ್‌ ನಡೆಸುತ್ತಿರುವ ಪ್ರತಿಭಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಭ್ರಷ್ಟಾಚಾರ ಬಯಲಾಗಿದ್ದಕ್ಕೆ ಕಾಂಗ್ರೆಸ್‌ ಬೀದಿಗೆ ಬಂದಿದೆ. ಇದು ದೇಶದ ಪ್ರಜಾಪ್ರಭುತ್ವ ಉಳಿಸುವ ಪ್ರಯತ್ನವಲ್ಲ. ಬದಲಾಗಿ ಗಾಂಧಿ ಕುಟುಂಬದ ಎರಡು ಸಾವಿರ ಕೋಟಿ ಉಳಿಸುವ ಪ್ರಯತ್ನ ಎಂದು ಸ್ಮೃತಿ ಇರಾನಿ ಆಪಾದಿಸಿದ್ದಾರೆ.

 

Share Post