BengaluruPolitics

ಯಾರಿಗೂ ಮತ ಹಾಕದೇ ಖಾಲಿ ಬ್ಯಾಲೆಟ್‌ ಹಾಕಿ ಬಂದ ಗುಬ್ಬಿ ಶ್ರೀನಿವಾಸ್‌

ಬೆಂಗಳೂರು; ಜೆಡಿಎಸ್‌ನ ಮತ್ತೊಬ್ಬ ಶಾಸಕ ಕೂಡಾ ಕೈಕೊಟ್ಟಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ್‌ ಅವರು ಖಾಲಿ ಬ್ಯಾಲೆಟ್‌ ಪೇಪರ್‌ನ್ನು ಮತಪಟ್ಟಿಗೆಗೆ ಹಾಕಿ ಹೋಗಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಗುಬ್ಬಿ ಶಾಸಕ ಶ್ರೀನಿವಾಸ್‌ ಕೂಡಾ ಕೆಲ ತಿಂಗಳಿಂದ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಅವರು ಕಾಂಗ್ರೆಸ್‌ ಸೇರುವ ತವಕದಲ್ಲಿದ್ದರು. ಆದ್ರೆ ಇಂದು ಮತದಾನ ಮಾಡಲು ಬಂದ ಅವರು ಖಾಲಿ ಬ್ಯಾಲೆಟ್‌ ಪೇಪರ್‌ ಅನ್ನು ಮತಪಟ್ಟಿಗೆಗೆ ಹಾಕಿಹೋಗಿದ್ದಾರೆ. ಆದ್ರೆ ಹೊರಬಂದಮೇಲೆ ನಾನು ಜೆಡಿಎಸ್‌ಗೆ ಮತ ಚಲಾಯಿಸಿದ್ದೇನೆ ಎಂದು ಹೇಳಿದ್ದಾರೆ.

Share Post