Bengaluru

ಕಾಂಗ್ರೆಸ್‌ಗೆ ಶ್ರೀನಿವಾಸಗೌಡ ಮತ; ಪಕ್ಷ ಬಿಟ್ಟುಹೋಗಲಿ ಎಂದ ಹೆಚ್ಡಿಕೆ

ಬೆಂಗಳೂರು; ಕೋಲಾರ ಕ್ಷೇತ್ರದ ಜೆಡಿಎಸ್‌ ಶಾಸಕ ಶ್ರೀನಿವಾಸಗೌಡ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪತ ಹಾಕಿರುವುದಕ್ಕೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂತಹವರಿಗೆ ಪಕ್ಷದಿಂದ ಶಿಸ್ತುಕ್ರಮ ಅಗತ್ಯವಿಲ್ಲ. ಮಾನ ಮರ್ಯಾದೆ ಇದ್ದ ಪಕ್ಷ ಬಿಟ್ಟುಹೋಗಲಿ ಎಂದರು.

ಕ್ಷೇತ್ರದ ಜನತೆಗೆ ಶ್ರೀನಿವಾಸಗೌಡ ಅವಮಾನ ಮಾಡಿದ್ದಾರೆ. ಈ ರೀತಿ ಮಾಡಿ ಜನರ ಮುಂದೆ ಹೇಗೆ ಹೋಗುತ್ತಾರೆ..? ಇಂತಹವರು ಪ್ರಜಾಪ್ರಭುತ್ವ ಉಳಿಸುತ್ತಾರಾ..? ಎಂದು ಹೆಚ್ಡಿಕೆ ಪ್ರಶ್ನೆ ಮಾಡಿದರು.

Share Post