BengaluruPolitics

ರಾಜ್ಯಸಭಾ ಚುನಾವಣೆ; ಸಿದ್ದರಾಮಯ್ಯ ಅವರದ್ದು ಉಡಾಫೆ ಮಾತು; ಹೆಚ್ಡಿಕೆ

ಬೆಂಗಳೂರು; ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಶಾಸಕರು ನಮಗೆ ಮತ ಹಾಕುತ್ತಾರೆ ಎಂಬ ಸಿದ್ದರಾಮಯ್ಯ ಮಾತಿಗೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಇದು ಸಿದ್ದರಾಮಯ್ಯ ಅವರ ಉಡಾಫೆ ಹೇಳಿಕೆ ಎಂದು ಲೇವಡಿ ಮಾಡಿದ್ದಾರೆ.

೨೦೧೬ ರ ಚುನಾವಣೆಯೇ ಬೇರೆ ಇದೇ ಬೇರೆ. ಈ ಚುನಾವಣೆ ಶಾಸಕರನ್ನು ಸೆಳೆಯುವುದರಿಂದ ಆಗುವುದಲ್ಲ. ನಮ್ಮ ಎರಡನೇ ಪ್ರಾಶಸ್ತ್ಯ ಮತ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ದೇವೇಗೌಡರು ರಾಜ್ಯಸಭೆಗೆ ನಿಂತಾಗ ಬಿಜೆಪಿ ಮೊದಲು ಅವರನ್ನು ಬೆಂಬಲಿಸಿತು. ಈ ಕಾರಣಕ್ಕಾಗಿ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಯನ್ನು ಹಾಕಲಿಲ್ಲ ಎಂದು ಹೆಚ್ಡಿಕೆ ಇದೇ ವೇಳೆ ಸ್ಪಷ್ಟನೆ ಕೊಟ್ಟರು.

 

Share Post